ಏರ್ ಶೋ ತಂದು ಭದ್ರತೆ ನೀಡದೇ ಇದ್ರೆ ಏನು ಪ್ರಯೋಜನ: ಕರಂದ್ಲಾಜೆ ಪ್ರಶ್ನೆ

Public TV
1 Min Read

ಚಿಕ್ಕಮಗಳೂರು: ಏರ್ ಶೋ ಬೇರೆ ಕಡೆ ಶಿಫ್ಟ್ ಆಗುತ್ತೆ ಅಂದಾಗ ಸಿಎಂ ಮತ್ತು ನಾವೆಲ್ಲರೂ ಒಗ್ಗೂಡಿ ಬೆಂಗಳೂರಿಗೆ ತಂದಿದ್ದೇವೆ. ಶೋ ಆಯೋಜಸಿದ ಬಳಿಕ ಅದಕ್ಕೆ ಸೂಕ್ತ ಭದ್ರತೆ ನೀಡದೇ ಇದ್ದರೆ ಏನು ಪ್ರಯೋಜನ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಪ್ರಶ್ನೆ ಮಾಡಿದ್ದಾರೆ.

ಅಗ್ನಿ ಅವಘಡ ಸಂಭವಿಸಿದ ಸ್ಥಳದಲ್ಲಿ ಮುನ್ನೇಚ್ಚರಿಕಾ ಕ್ರಮವಾಗಿ ಅಗ್ನಿಶಾಮಕದ ವಾಹನಗಳು ಮತ್ತು ಪೊಲೀಸರು ಇರಲಿಲ್ಲ. ದಿನೇಶ್ ಗುಂಡೂರಾವ್ ಅವರಿಗೆ ಬುದ್ಧಿ ಭ್ರಮಣೆಯಾಗಿದ್ದು, 300 ಕಾರುಗಳು ಸುಟ್ಟು ಹೋದಾಗ ಎಲ್ಲಿ ಹೋಗಿದ್ದರು? ಗುಂಡೂರಾವ್ ಸಹ ಒಂದು ಪಕ್ಷದ ಅಧ್ಯಕ್ಷರಾಗಿದ್ದು, ತಮ್ಮ ವೈಫಲ್ಯಗಳನ್ನು ಮರೆಮಾಚಲು ಈ ರೀತಿಯ ಬೇಜವಾಬ್ದಾರಿ ಹೇಳಿಕೆ ನೀಡಬಾರದು ಎಂದು ಗುಡುಗಿದರು.

ಮಂತ್ರಿಗಳು ಸರ್ಕಾರದ ವೈಫಲ್ಯವನ್ನ ಬಿಜೆಪಿ ತಲೆಗೆ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಮಂತ್ರಿಗಳು, ಅಧಿಕಾರಿಗಳು ರಾಜ್ಯದಲ್ಲಿ ಯಾರು ಕೆಲಸ ಮಾಡುತ್ತಿಲ್ಲ. ಆರು-ಹತ್ತು ತಿಂಗಳಿಗೊಮ್ಮೆ ಅಧಿಕಾರಿಗಳನ್ನ ವರ್ಗಾವಣೆ ಮಾಡಿ, ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ. ವರ್ಗಾವಣೆಯಾದ ಏರ್ ಶೋನ ಬೆಂಗಳೂರಿಗೆ ತಂದ್ರೆ ಸರ್ಕಾರದ ಬೇಜವಾಬ್ದಾರಿಯಿಂದ ಕರ್ನಾಟಕಕ್ಕೆ ಅವಮಾನವಾಗಿದೆ. ಮೊದಲಿಗೆ ಒಂದು ಕಾರಿಗೆ ಬೆಂಕಿ ಹತ್ತಿಕೊಂಡು ಪೊಲೀಸ್ ಅಧಿಕಾರಿಗಳು ಎಲ್ಲಿದ್ದರು? ಅವರ ಕಣ್ಣಿಗೆ ಅದು ಕಾಣಿಸಿಲ್ವಾ? ಎಂದು ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕಿದರು.

https://www.youtube.com/watch?v=BUA3pczdc3w

https://twitter.com/ShobhaBJP/status/1099924539759194112

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *