ಜೊತೆಯಲ್ಲಿದ್ದವರೇ ಮದ್ದು ಹಾಕ್ತಾರೆ ಏನ್ಮಾಡಲಿ – ಹೆಚ್.ವಿಶ್ವನಾಥ್‌ಗೆ ಸೋಮಶೇಖರ್ ತಿರುಗೇಟು

Public TV
1 Min Read

ಮೈಸೂರು: ದಸರಾ ಅದ್ವಾನವಾಯ್ತು ಎಂಬ ಎಂಎಲ್‌ಸಿ (MLC) ಹೆಚ್.ವಿಶ್ವನಾಥ್ (H Vishwanath) ಟೀಕೆಗೆ ತಿರುಗೇಟು ನೀಡಿರುವ ಸಚಿವ ಎಸ್.ಟಿ ಸೋಮಶೇಖರ್ (ST Somashekhar) ಜೊತೆಯಲ್ಲಿದ್ದವರೇ ಮದ್ದು ಹಾಕ್ತಾರೆ ಏನ್ಮಾಡಲಿ ಎಂದು ಹೇಳಿದ್ದಾರೆ.

ಕೆಲವರು ಜೊತೆಯಲ್ಲೇ ಇದ್ದು ಮದ್ದು ಹಾಕುವ ಕೆಲಸ ಮಾಡುತ್ತಾರೆ. ರಾಜಕೀಯವಾಗಿ ಏನು ಮಾಡಲು ಆಗದಿದ್ದಾಗ ಪಕ್ಕದಲ್ಲೇ ಕುಳಿತು ಮದ್ದು ಹಾಕಿಬಿಡುತ್ತಾರೆ. ಅಂಥವರಿಗೆ ಚಾಮುಂಡಿ ತಾಯಿ ಒಳ್ಳೇ ಬುದ್ದಿ ಕೊಡಲಿ ಎಂದು ಕುಟುಕಿದ್ದಾರೆ. ಇದನ್ನೂ ಓದಿ: 2 ಗಂಟೆ ಆತ್ಮಹತ್ಯೆ ಹೈಡ್ರಾಮಾ – ಸಿನಿಮಾ ರೀತಿಯಲ್ಲಿ ದಂಪತಿಯ ರಕ್ಷಣೆ

ದಸರಾ (Mysuru Dasara) ಆದಮೇಲೆ, ದಸರಾ ನಡೆಯುವಾಗ ಇಂಥ ಮದ್ದು ಹಾಕುವ ಕೆಲಸ ಜೊತೆಯಲ್ಲಿ ಇದ್ದವರಿಂದಲೇ ನಡೆದಿದೆ. ಅದು ನನಗೆ ಗೊತ್ತಿದೆ. ಆದರೆ ಎಲ್ಲವನ್ನೂ ಮೀರಿ ದಸರಾ ಯಶಸ್ವಿಯಾಗಿದೆ. ಪ್ರಧಾನಿಯಾದಿಯಾಗಿ (PrimeMinister) ಎಲ್ಲರೂ ಪ್ರಶಂಸಿಸಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಸಾನ್ಯ ಅಯ್ಯರ್ ತಂಟೆಗೆ ಬಂದವರಿಗೆ ರೂಪೇಶ್ ಶೆಟ್ಟಿ ಖಡಕ್ ವಿಲನ್ : ಪ್ರಶಾಂತ್ ಸಂಬರ್ಗಿ ಎಚ್ಚರಿಕೆ

ದಸರಾದ 10 ದಿನವೂ ಎಲ್ಲಾ ಕಾರ್ಯಕ್ರಮಕ್ಕೆ ಹೋಗಿದ್ದೇನೆ. ಮೈಸೂರಿನವರೇ ಉಸ್ತುವಾರಿ ಸಚಿವರಾಗಿದ್ದಾಗಲೂ ಈ ರೀತಿ ಎಲ್ಲಾ ಕಾರ್ಯಕ್ರಮಕ್ಕೆ ಹೋಗಿರಲಿಲ್ಲ. ನಾನು ಪ್ರಾಮಾಣಿಕವಾಗಿ ಅಚ್ಚುಕಟ್ಟಾಗಿ ದಸರಾ ಮಾಡಲು ಶ್ರಮಿಸಿದ್ದೇನೆ. ದಸರಾದ ಒಟ್ಟಾರೆ ಲೆಕ್ಕವನ್ನು ಶೀಘ್ರದಲ್ಲೇ ಕೊಡುತ್ತೇವೆ. ಜೊತೆಗೆ ಈ ಬಾರಿ ದಸರೆಯಲ್ಲಿ ಆದ ಲೋಪಗಳ ಬಗ್ಗೆ ಎಲ್ಲರೊಂದಿಗೆ ಚರ್ಚಿಸಿ ಮುಂದಿನ ದಸರಾದ ದೃಷ್ಟಿಯಿಂದ ಪುಸ್ತಕ ತರಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *