SSLC ಫಲಿತಾಂಶ ಬಂದಾಗ 6 ನೇ ರ‍್ಯಾಂಕ್, ಮರು ಮೌಲ್ಯಮಾಪನದ ನಂತ್ರ ಜಿಲ್ಲೆಗೆ ಪ್ರಥಮ!

Public TV
1 Min Read

ಬಳ್ಳಾರಿ: ಎಸ್‍ಎಸ್ ಎಲ್‍ಸಿ ಫಲಿತಾಂಶದ ವೇಳೆ ರಾಜ್ಯಕ್ಕೆ 6 ರ‍್ಯಾಂಕ್  ಪಡೆದಿದ್ದ ವಿದ್ಯಾರ್ಥಿ ಮರು ಮೌಲ್ಯಮಾಪನದ ನಂತರ ರಾಜ್ಯಕ್ಕೆ ಮೂರನೇ ರ‍್ಯಾಂಕ್ ಪಡೆದಿದ್ದಾನೆ.

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯ ಜ್ಞಾನ ಭಾರತಿ ಶಾಲೆಯ ವಿದ್ಯಾರ್ಥಿ ಸೂರಜ್ ಫಲಿತಾಂಶದ ಬಂದಾಗ 620 ಅಂಕ ಪಡೆದು ರಾಜ್ಯಕ್ಕೆ 6 ಸ್ಥಾನ ಪಡೆದಿದ್ದನು. ಆದರೆ ಮರು ಮೌಲ್ಯ ಮಾಪನ ಮಾಡಿಸಿದಾಗ ಸೂರಜ್ ಗೆ ಮೂರು ಅಂಕಗಳು ಹೆಚ್ಚುವರಿಯಾಗಿ ದೊರೆತಿವೆ. ಈ ಮೂಲಕ ಸೂರಜ್ 623 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಮೂರನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ.

ಅಷ್ಟೇ ಅಲ್ಲದೇ ಬಳ್ಳಾರಿ ಜಿಲ್ಲೆಗೆ ಸೂರಜ್ ಗೆ ಪ್ರಥಮ ಸ್ಥಾನ ಲಭಿಸಿದೆ. ಮರು ಮೌಲ್ಯಮಾಪನದ ವೇಳೆ ಸೂರಜ್ ಗೆ ಇಂಗ್ಲೀಷ್, ಕನ್ನಡ ಮತ್ತು ಹಿಂದಿ ವಿಷಯಗಳಲ್ಲಿ ತಲಾ ಒಂದು ಹೆಚ್ಚುವರಿಯಾಗಿ ದೊರೆತಿದೆ.

Share This Article
Leave a Comment

Leave a Reply

Your email address will not be published. Required fields are marked *