ಬಿಎಸ್‍ವೈ ಸಿಎಂ ಸ್ಥಾನ ಉಳಿಸಲು ಅಭಿಮಾನಿಗಳಿಂದ ವಿಶೇಷ ಪೂಜೆ

Public TV
1 Min Read

ತುಮಕೂರು: ಮುಖ್ಯಮಂತ್ರಿ ಯಡಿಯೂರಪ್ಪ ಸಿಎಂ ಆಗಿ ಉಳಿಯುತ್ತಾರಾ, ಇಲ್ಲವಾ ಎನ್ನುವುದು ಇಂದು ನಿರ್ಧಾರವಾಗಲಿದೆ. ಆದರೆ ಯಡಿಯೂರಪ್ಪರ ಸಿಎಂ ಸ್ಥಾನ ಉಳಿಸಲು ಅಭಿಮಾನಿಗಳು ವಿಶೇಷ ಪೂಜೆ ಮಾಡುತ್ತಿದ್ದಾರೆ.

ಯಡಿಯೂರಪ್ಪ ಅವರ ಮುಖ್ಯಮಂತ್ರಿ ಸ್ಥಾನ ಉಳಿಸಲು ಅಭಿಮಾನಿಗಳು ಪೂಜೆ – ಪುನಸ್ಕಾರವನ್ನು ಮಾಡುತ್ತಿದ್ದಾರೆ. ಕುಣಿಗಲ್ ತಾಲೂಕಿನ ಯಡಿಯೂರು ಸಿದ್ಧಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಯಡಿಯೂರು ಸಿದ್ಧಲಿಂಗೇಶ್ವರ ಯಡಿಯೂರಪ್ಪನವರ ಮನೆ ದೇವರಾಗಿರುವ ಕಾರಣ ಅಭಿಮಾನಿಗಳು ವಿಶೇಷ ಪೂಜೆ ಮಾಡುತ್ತಿದ್ದಾರೆ.

ಇಂದು ಬೆಳಗ್ಗೆ ಸುಮಾರು 6 ಗಂಟೆಯಿಂದ ರಾತ್ರಿ ವರೆಗೆ ನಿರಂತರ ಪೂಜೆ ಮಾಡಲು ಭಕ್ತರು ನಿರ್ಧಾರ ಮಾಡಿದ್ದಾರೆ. ಪೂಜೆ ವೇಳೆ ದೇವರಿಗೆ ವಿಶೇಷ ಅಭಿಷೇಕ ಉರುಳುಸೇವೆ, ಮಹಾರುದ್ರಯಾಗ, ಸಂಕಲ್ಪ ವ್ರತಗಳನ್ನು ಮಾಡಲಿದ್ದಾರೆ. ಅಷ್ಟೇ ಅಲ್ಲದೇ ಸವಿವಿಧ ಮಠಾಧೀಶರಿಂದ ಪೂಜೆ ನೆರವೇರಲಿದೆ.

Share This Article
Leave a Comment

Leave a Reply

Your email address will not be published. Required fields are marked *