ಮಾಜಿ ಶಾಸಕ ಯೋಗೇಶ್ವರ್ ಫೋಟೋವನ್ನಿಟ್ಟು ಪೂಜೆ ಸಲ್ಲಿಸಿದ ಗ್ರಾಮಸ್ಥರು

Public TV
1 Min Read

ರಾಮನಗರ: ಚುನಾವಣೆಯಲ್ಲಿ ಸೋತರೂ ಕೆರೆಗೆ ನೀರು ಹರಿಸಿದ್ದಾರೆಂದು ಮಾಜಿ ಶಾಸಕ ಯೋಗೇಶ್ವರ್ ಫೋಟೋವನ್ನಿಟ್ಟು ಚನ್ನಪಟ್ಟಣ ತಾಲೂಕಿನ ಭೂಹಳ್ಳಿ ಗ್ರಾಮಸ್ಥರು ಪೂಜೆ ಮಾಡಿದ್ದಾರೆ.

ಕಣ್ವಾ ಏತನೀರಾವರಿ ಮೂಲಕ ಗುರುವಾರ ಭೂಹಳ್ಳಿ, ಹುಚ್ಚಯ್ಯನದೊಡ್ಡಿ, ಬ್ರಹ್ಮಣೀಪುರ ಗ್ರಾಮದ ಕೆರೆಗಳನ್ನು ತುಂಬಿಸುವ ಸಲುವಾಗಿ ನೀರನ್ನು ಹರಿಸಲಾಯಿತು. ಕಳೆದ ಎರಡು ವರ್ಷಗಳಿಂದ ತಮ್ಮ ಕೆರೆಗೆ ನೀರು ಹರಿಸಿ ಎಂದು ಒತ್ತಾಯಿಸುತ್ತಲೇ ಬಂದಿದ್ದ ಭೂಹಳ್ಳಿ ಗ್ರಾಮಸ್ಥರು ಕೆರೆಗೆ ನೀರು ಹರಿದು ಬಂದ ಹಿನ್ನೆಲೆಯಲ್ಲಿ ಸಂಭ್ರಮಿಸಿದ್ದಾರೆ.

ಅಷ್ಟೇ ಅಲ್ಲದೇ ಗ್ರಾಮಸ್ಥರು ಹಾಗೂ ಯೋಗೇಶ್ವರ್ ಬೆಂಬಲಿಗರು ಸೇರಿ ಮಾಜಿ ಶಾಸಕ ಯೋಗೇಶ್ವರ್ ಫೋಟೋವನ್ನಿಟ್ಟು ಪೂಜೆ ಸಲ್ಲಿಸಿದ್ದಾರೆ. ಚುನಾವಣೆಯಲ್ಲಿ ಸೋತರೂ ಸಹ ತಮ್ಮ ಗ್ರಾಮದ ಕೆರೆಗೆ ನೀರು ಹರಿಸಿದ್ದಾರೆಂದು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಅಲ್ಲದೇ ಸಿಪಿವೈ ಫೋಟೋಗೆ ಪೂಜೆ ಮಾಡಿದ ಫೋಟೋಗಳನ್ನು ಕ್ಲಿಕ್ಕಿಸಿ ಫೇಸ್ ಬುಕ್‍ನಲ್ಲಿ ಹಾಕಿದ್ದಾರೆ. ಈಗ ಆ ಫೋಟೋಗಳು ವೈರಲ್ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *