ಉಮೇಶ್ ಜಾಧವ್ ರಾಜೀನಾಮೆ ಬಗ್ಗೆ ಸ್ಪೀಕರ್ ಮಾತು

Public TV
1 Min Read

ಕೋಲಾರ: ಚಿಂಚೋಳಿ ಶಾಸಕ ಉಮೇಶ್ ಜಾಧವ್ ನನ್ನ ಮನೆಗೆ ಬಂದ್ರು ರಾಜೀನಾಮೆ ಕೊಟ್ರು. ಆದ್ರೆ ರಾಜೀನಾಮೆಗೆ ಯಾವುದೇ ಕಾರಣ ಹೇಳಿಲ್ಲ. ಕಾನೂನಿನಡಿ ಮುಂದೆ ಕ್ರಮ ಕೈಗೊಳ್ಳುವೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.

ಕೋಲಾರದ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ ಗ್ರಾಮದಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಬೆಳಗ್ಗೆ ಮನೆಯಲ್ಲಿ ತಿಂಡಿ ತಿಂತಿದ್ದೆ. ಪಾಪ ಬೆಳಗ್ಗೆನೆ ಎದ್ದು ನಮ್ಮೂರಿಗೆ ಬಂದ್ರು ರಾಜೀನಾಮೆ ಕೊಟ್ರು. ನಾನು ತಗೊಂಡೆ ಜೊತೆಗೆ ತಿಂಡಿ ಮಾಡಿದ್ವಿ, ಪೇಪರ್ ಕೊಟ್ಟು ಹೋದ್ರು ಎಂದು ಹೇಳಿದ್ರು.

ರಾಜೀನಾಮೆ ಪತ್ರವನ್ನ ಅಧಿಕಾರಿಗಳಿಗೆ ಕಳಿಸಿದ್ದೇನೆ. ನಾನು ಹಳ್ಳಿಯಲ್ಲಿ ಇದ್ದೇನೆ. ಹಾಗಾಗಿ ನಾಳೆ ಬೆಂಗಳೂರಿಗೆ ಹೋಗಿ ಅಧಿಕಾರಿಗಳ ಬಳಿ ಮಾತನಾಡಿ ಕ್ರಮ ಕೈಗೊಳ್ಳುತ್ತೇನೆ. ನಾನು ಹಳ್ಳಿಯಲ್ಲಿ ಹುಟ್ಟಿ ಬೆಳೆದವನು ಕಾನೂನಿನ ಅರಿವು ಗೊತ್ತಿಲ್ಲ. ಅದಕ್ಕೆ ಅಧಿಕಾರಿಗಳೊಂದಿಗೆ ಪರಿಶೀಲನೆ ಮಾಡಬೇಕು. ಅದಾದ ನಂತರ ಕ್ರಮ ಕೈಗೊಳ್ಳುವೆ. ಇನ್ನೂ ನನ್ನ ನಿರ್ಧಾರಕ್ಕೆ ನಿಗದಿತ ವೇಳೆ ಇಲ್ಲ ಎಂದು ಅವರು ಹೇಳಿದ್ರು.

ಇದೇ ವೇಳೆ ಮಕ್ಕಳ ಕಲಿಕೆಯ ಸಮಸ್ಯೆಯನ್ನೂ ರಾಜಕೀಯಕ್ಕಾಗಿ ತಮಾಷೆ ಮಾಡಿದ ಪ್ರಧಾನಿ ಮೋದಿ ವಿರುದ್ಧ ಟೀಕೆ ವ್ಯಕ್ತವಾಗಿರುವುದಕ್ಕೆ ಅವರ ಸ್ಥಾನಕ್ಕೆ ತಕ್ಕಂತೆ ನಡೆದುಕೊಳ್ಳಬೇಕು. ಅವರ ವ್ಯಕ್ತಿತ್ವಗಳು ಇದರಿಂದ ನಿರ್ಧಾರವಾಗತ್ತದೆ. ಮಕ್ಕಳ ಕಲಿಕೆಯ ಸಮಸ್ಯೆಯಲ್ಲೂ ಪ್ರಧಾನಿ ಮೋದಿ ರಾಜಕೀಯ ಹುಡುಕಿ ತೀವ್ರ ಟೀಕೆಗೆ ಗುರಿಯಾಗಿರುವುದಕ್ಕೆ ತೀಕ್ಷ್ಣವಾಗಿ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *