… your content …

ದೇವರಿಗೆ ಕನ್ನಡದವರ ಮೇಲೆ ಕೋಪ ಬಂದಿದ್ಯಾ- ವಿನೋದ್ ರಾಜ್ ಭಾವುಕ

Public TV
2 Min Read

ಚಿಕ್ಕ ವಯಸ್ಸಿನಲ್ಲಿ ಸ್ಪಂದನಾಗೆ ಹೀಗೆ ಆಗಬಾರದಿತ್ತು. ವಿಧಿಯ ಲೀಲೆ ಇದು, ನನಗೆ ಏನೋ ಹೇಳಬೇಕೋ ಗೊತ್ತಾಗುತ್ತಿಲ್ಲ ಎಂದು ನಟ ವಿನೋದ್ ರಾಜ್ (Vinod Raj) ಭಾವುಕರಾಗಿದ್ದಾರೆ. ಇದನ್ನೂ ಓದಿ:ಸ್ಪಂದನಾ ಅಂತಿಮ ದರ್ಶನ: ಗಳಗಳನೆ ಅತ್ತ ಅಶ್ವಿನಿ ಪುನೀತ್‌ರಾಜ್‌ಕುಮಾರ್

ಸ್ಪಂದನಾ (Spandana) ಅಂತಿಮ ದರ್ಶನ ಪಡೆದ ವಿನೋದ್ ರಾಜ್ (Vinod Raj) ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಅಕಾಲಿಕ ಮರಣದ ಬಗ್ಗೆ ನಾವು ಏನೂ ಮಾತನಾಡೋಕೆ ಆಗಲ್ಲ. ವಿಜಯ ರಾಘವೇಂದ್ರ ನೊಂದಿರೋದನ್ನ ನೋಡಿದಾಗ ಅವರಿಗೆ ದೇವರು ಅಪಾರವಾದ ಶಕ್ತಿ ಕೊಟ್ಟು ಕಾಪಾಡಲಿ. ನಾವು ಎಷ್ಟೇ ಧೈರ್ಯ ಹೇಳಿದ್ರು ಸಾಲಲ್ಲ. ಅವರೇ ಅವರ ಗಾಯವನ್ನ ಸರಿ ಮಾಡಿಕೊಳ್ಳಬೇಕಾಗುತ್ತದೆ.

ಯಾರ ಮಾತಿನಿಂದಲೂ ಆರುವಂತಹ ನೋವಲ್ಲ ಅದು. ವಿಧಿ ಆಟನೋ ದೇವರೋ ಸ್ಪಂದನಾ ಸ್ಥಿತಿ ನೋಡಿದ್ರೆ ಏನು ಹೇಳೋಕೆ ಆಗುತ್ತಿಲ್ಲ. ವಿಚಿತ್ರ ಇದು ನಮಗೆ ತಲೆ ಕೆಟ್ಟು ಹೋಗುತ್ತಿದೆ. ಈಗ ನಾನು ಮತ್ತು ಅಮ್ಮಾ ಕೂಡ ಟೆಸ್ಟ್ ಮಾಡಿಕೊಂಡಿದ್ವಿ. ನಾನು ಹೋದರೆ ಕೂಡ ನನ್ನ ತಾಯಿನ ನೋಡಿಕೊಳ್ಳೋಕೆ ಯಾರು ಇಲ್ಲ. ದೇವರನ್ನ ಯಾವ ರೀತಿ ಕೈ ಮುಗಿಬೇಕು ಅಂತಾ ನಮಗೆ ಗೊತ್ತಾಗುತ್ತಿಲ್ಲ. ದೇವರಿಗೆ ಕನ್ನಡದವರ ಮೇಲೆ ಕೋಪ ಬಂದಿದ್ಯಾ ಅಂತಾ ನಮಗೆ ಅರ್ಥ ಆಗುತ್ತಿಲ್ಲ. ದೇವರನ್ನ ಪೂಜೆ ಮಾಡಿದಕ್ಕೆ ಈ ಪ್ರತಿಫಲ ಕೊಟ್ರಾ ತಿಳಿಯುತ್ತಿಲ್ಲ.

ಅಪ್ಪು ನಿಧನರಾಗಿ 2 ವರ್ಷ ಆಯ್ತು. ಅವರ ಕುಟುಂಬದಲ್ಲಿ ಅವರ ಜನ್ಮ ಇರೋವರೆಗೂ ಅಪ್ಪು ಕಳೆದುಕೊಂಡ ನೋವು ಮರೆಯೋಕೆ ಆಗಲ್ಲ. ಅವರಿಗೆ ದೈವಿಕ ಕಳೆಯಿತ್ತು ಎಂದು ವಿನೋದ್ ರಾಜ್ ಭಾವುಕರಾಗಿದ್ದಾರೆ.

ಸದ್ಯ ಮಲ್ಲೇಶ್ವರಂನಲ್ಲಿರುವ ಅವರ ನಿವಾಸದ ಮುಂದೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಹಾಗೂ ಚಿತ್ರರಂಗದ ಗಣ್ಯರು ಅಂತಿಮ ದರ್ಶನ ಪಡೆದು, ವಿಜಯ ರಾಘವೇಂದ್ರ (Vijay Raghavendra) ಅವರಿಗೆ ಸಾಂತ್ವನ ಹೇಳುತ್ತಿದ್ದಾರೆ.

ಹರಿಶ್ಚಂದ್ರ ಘಾಟ್ ನಲ್ಲಿ ಸ್ಪಂದನ ಅಂತ್ಯಕ್ರಿಯೆ ಹಿನ್ನೆಲೆಯಲ್ಲಿ ಹರಿಶ್ಚಂದ್ರಘಾಟ್‌ನಲ್ಲಿ ಮಧ್ಯಾಹ್ನ 2 ಗಂಟೆಗೆ ಬರ್ನಿಂಗ್‌ಗೆ ಸ್ಲಾಟ್ ಬುಕ್ಕಿಂಗ್ ಮಾಡಲಾಗಿದೆ. ಈಡಿಗ ಸಮುದಾಯದ ಸಂಪ್ರದಾಯದಂತೆ ಪೂಜೆ ಪುನಸ್ಕಾರ ನಡೆಸಿ ಬಳಿಕ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಅಂತ್ಯಕ್ರಿಯೆಗೆ ಪೂಜೆ ಪುನಸ್ಕಾರ ಹಿನ್ನೆಲೆ ಬಿಬಿಎಂಪಿಯಿಂದ ಕೂಡ ಸ್ವಚ್ಛತಾ ಕಾರ್ಯ ಮಾಡಲಾಗಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್