ಸೋನು ಗೌಡ ಪ್ರಕಾರ ಆರ್ಯವರ್ಧನ್‌ ಗುರೂಜಿ ಕಳ್ಳ ಸ್ವಾಮಿ ಅಂತೆ

By
1 Min Read

ಬಿಗ್ ಬಾಸ್ ಓಟಿಟಿಗೆ(Bigg Boss) ಅಭಿಮಾನಿಗಳು ಫಿದಾ ಆಗಿದ್ದಾರೆ. ಸಾಕಷ್ಟು ವಿಚಾರಗಳಿಂದ ಓಟಿಟಿ ನೋಡುಗರ ಗಮನ ಸೆಳೆಯುತ್ತಿದೆ. ದೊಡ್ಮನೆಯಲ್ಲಿ ತನ್ನ ನಡೆ, ನುಡಿಯಿಂದ ಹೈಲೈಟ್ ಆಗಿರುವ ಸೋನು ಶ್ರೀನಿವಾಸ್ ಗೌಡ(Sonu Srinivas Gowda) ಮತ್ತೆ ಕಿರಿಕ್ ಮಾಡಿಕೊಂಡಿದ್ದಾರೆ. ಗುರೂಜಿಗೆ ಕಳ್ಳ ಸ್ವಾಮೀಜಿ ಎಂದು ಸೋನುಗೆ ಮನೆ ಮಂದಿ ಕೂಡ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಮನೆಗೆ ಬಂದ ದಿನದಿಂದ ಸೋನು ಒಂದಲ್ಲಾ ಒಂದು ವಿಷ್ಯವಾಗಿ ಕಿರಿಕ್ ಮಾಡುತ್ತಲೇ ಬಂದಿದ್ದಾರೆ. ಗುರೂಜಿಗೆ ರೂಪೇಶ್ ಹೆಡ್ ಮಸಾಜ್ ಮಾಡುವಾಗ ಮನೆ ಮಂದಿಯೆಲ್ಲ ಒಟ್ಟಿಗೆ ಕುಳಿತಿದ್ದರು. ಈ ವೇಳೆ ಸೋನು, ಗುರೂಜಿಗೆ ಡವ್ ರಾಜ ಎಂದು ಹೇಳಿದ್ದಾರೆ. ಹೀಗೆ ಮಾತನಾಡಬೇಡ ಎಂದ ಗುರೂಜಿಗೆ ಮತ್ತೆ ಕಳ್ಳ ಸ್ವಾಮೀಜಿ ಎಂದು ಕರೆಯಬೇಕಾ ಎಂದಿದ್ದಾರೆ. ಈ ವೇಳೆ ಸಾನ್ಯ, ಅವರು ದೊಡ್ಡವರು ಹೀಗೆಲ್ಲಾ ಮಾತನಾಡಬಾರದು ಎಂದು ಹೇಳಿದ್ದಾರೆ. ನೀನು ಮಧ್ಯೆ ಮಾತನಾಡಬೇಡ ಎಂದು ಸೋನು ಗದರಿಸಿದ್ದಾರೆ.

ಇನ್ನು ಸೋನು ಮಾತಿಗೆ ಸಾನ್ಯ ಕೂಡ ಖಡಕ್ ಉತ್ತರ ನೀಡಿದ್ದಾರೆ. ನಾನು ನಿಮ್ಮ ಮನೆ ನಾಯಿನಾ, ಹೋಗೆಲೇ ಎಂದು ಪ್ರತಿಯುತ್ತರ ನೀಡಿದ್ದಾರೆ. ನೀನು ಆಡಿದ ಮಾತು ಸರಿಯಿಲ್ಲ ಅವರನ್ನ ಫಾಲೋವ್ ಮಾಡುವ ಸಾಕಷ್ಟು ಜನ ಇದ್ದಾರೆ. ಅವರಿಗೂ ಬೇಸರವಾಗುತ್ತೆ ಎಂದು ಜಯಶ್ರೀ ಕೂಡ ಈ ವೇಳೆ ಧ್ವನಿಗೂಡಿಸಿದ್ದಾರೆ. ಬಳಿಕ ಗುರೂಜಿ ಬಳಿ ಸೋನು ಕ್ಷಮೆ ಕೇಳಿದ್ದಾರೆ. ಮೊದಲಿಗೆ ತಮಾಷೆಯಿಂದ ಆಡಿದ ಮಾತು ನಂತರ ಗಲಾಟೆಯಲ್ಲಿ ಅಂತ್ಯವಾಗಿದೆ. ಇದನ್ನೂ ಓದಿ:ಯಶ್ ಮುಂದಿನ ಚಿತ್ರಕ್ಕೆ ಪೂಜಾ ಹೆಗ್ಡೆ ನಾಯಕಿನಾ?

ಸೋನು ಆಡಿರುವ ಮಾತಿನಿಂದ ಗುರೂಜಿ ಕೂಡ ಬೇಸರಗೊಂಡಿದ್ದಾರೆ. ತಮ್ಮ ವೃತ್ತಿಯ ಬಗ್ಗೆ ಮಾತನಾಡಿದ್ದು ತಪ್ಪು ಎಂದು ಹೇಳಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *