ಮೃತ ತಾಯಿಗಾಗಿ ಅನ್ನ, ನೀರು ಬಿಟ್ಟು ಶವದ ಪಕ್ಕದಲ್ಲೇ ಕಾದು ಕುಳಿತ ಪುತ್ರ!

Public TV
1 Min Read

ಕೋಲ್ಕತಾ: ಮೃತ ತಾಯಿಗಾಗಿ ಅನ್ನ, ನೀರು ಬಿಟ್ಟು ಪುತ್ರನೊಬ್ಬ ಶವದ ಪಕ್ಕದಲ್ಲೇ ಕಾದು ಕುಳಿತ ಘಟನೆ ಭಾನುವಾರ ಕೋಲ್ಕತಾದ ಬೌಬಜಾರ್ ನಲ್ಲಿ ನಡೆದಿದೆ.

ಹೆತ್ತ ತಾಯಿಗಾಗಿ ಆಕೆಯ ಮೃತದೇಹದ ಬಳಿ 30 ವರ್ಷದ ಪುತ್ರ ಕಾದು ಕುಳಿತ್ತಿದ್ದು, ಈಗ ಆತನಿಗೆ ಮಾತನಾಡಲು ಹಾಗೂ ಎದ್ದು ಓಡಾಡಲು ಸಾಧ್ಯವಾಗುತ್ತಿಲ್ಲ. ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮುಚ್ಚಿಪರಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶಶಿಬುಸನ್ ದೇ ಸ್ಟ್ರೀಟ್‍ನಲ್ಲಿರುವ ಈತನ ಮನೆಯಿಂದ ಮೃತದೇಹದ ವಾಸನೆ ಬಂದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಮನೆಯವರು ನಮಗೆ ಮಾಹಿತಿ ತಿಳಿಸಿದ್ದಾರೆ. ವಿಷಯ ತಿಳಿದ ತಕ್ಷಣ ನಾವು ಆತನ ಮನೆಯ ಬಾಗಿಲನ್ನು ಹೊಡೆದು ಒಳಗೆ ಹೋದೆವು. ನಂತರ ಮಂಚದ ಮೇಲಿದ್ದ ಮಹಿಳೆಯ ಮೃತದೇಹವನ್ನು ನೋಡಿದ್ದೇವು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷಗೆ ಕಳುಹಿಸಿ, ನಂತರ ಅನ್ನ, ನೀರು ಬಿಟ್ಟು ಕುಳಿತ ಆ ವ್ಯಕ್ತಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮೂಲಗಳ ಪ್ರಕಾರ ತಾಯಿ ಕಾಯಿಲೆಯಿಂದ ಬಳಲಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *