ಬಳ್ಳಾರಿ ಎಲೆಕ್ಷನ್ ಬಡಿದಾಟಕ್ಕೆ ಮೆಗಾ ಟ್ವಿಸ್ಟ್- ಸೋಮಶೇಖರ್ ರೆಡ್ಡಿ ವಿರುದ್ಧ ಅತ್ತಿಗೆ ಅರುಣಾ ಲಕ್ಷ್ಮಿ ಕಣಕ್ಕೆ

Public TV
2 Min Read

ಬಳ್ಳಾರಿ: ರಾಜ್ಯ ರಾಜಕೀಯದಲ್ಲೀಗ ಅಣ್ತಮ್ಮಾಸ್ ಬಹಳ ಸದ್ದು ಮಾಡುತ್ತಿದ್ದಾರೆ. ಟಿಕೆಟ್ ವಿಚಾರದಲ್ಲಿ ಕುಮಾರಸ್ವಾಮಿ (HD Kumaraswamy) ಯ ಮಾತು ಮೀರಲ್ಲ ಅಂತ ಅಣ್ಣ ರೇವಣ್ಣ ಘೋಷಿಸಿದ್ರೆ, ಇತ್ತ ಡಿಕೆ (DK Shivakumar) ವಿರುದ್ಧ ಜಾರಕಿಹೊಳಿ (Ramesh Jarakiholi) ಬ್ರದರ್ಸ್ ಒಂದಾಗಿದ್ದಾರೆ. ಇದರ ಬೆನ್ನಲ್ಲೇ ಸಹೋದರ ಸೋಮಶೇಖರ್ ರೆಡ್ಡಿ ವಿರುದ್ಧವೇ ಜನಾರ್ದನ ರೆಡ್ಡಿ ತೊಡೆತಟ್ಟಿದ್ದಾರೆ. ಬಳ್ಳಾರಿ ನಗರದಲ್ಲಿ ಸೋಮಶೇಖರ್ ರೆಡ್ಡಿ‌ (Somashekhar Reddy) ಎದುರು ಪತ್ನಿ ಅರುಣಾ ಲಕ್ಷ್ಮಿ (Aruna Laxmi) ಯನ್ನು ಕಣಕ್ಕಿಳಿಸಲಿದ್ದಾರೆ.

ಹೌದು. ಗಣಿ ಧೂಳಿನ ಜೊತೆ ರಾಜ್ಯ ರಾಜಕಾರಣದಲ್ಲೂ ಪ್ರಖ್ಯಾತಿ ಹಾಗೂ ಕುಖ್ಯಾತಿ ಹೊಂದಿರುವ ಜಿಲ್ಲೆ ಬಳ್ಳಾರಿ. ಇಂತಹ ಬಳ್ಳಾರಿಯಲ್ಲಿ ರಾಮ-ಲಕ್ಷ್ಮಣರಂತಿದ್ದ ಅಣ್ಣ, ತಮ್ಮನ ಮಧ್ಯೆಯೇ ಅಧಿಕಾರಕ್ಕಾಗಿ ಯುದ್ಧ ಆರಂಭವಾಗಿದೆ. ಬಳ್ಳಾರಿ ನಗರದ ಬಿಜೆಪಿ ಶಾಸಕ, ಸಹೋದರ ಸೋಮಶೇಖರ್ ರೆಡ್ಡಿ ವಿರುದ್ಧವೇ ರಣಕಹಳೆ ಮೊಳಗಿಸಿದ್ದಾರೆ ಗಾಲಿ ಜನಾರ್ದನ ರೆಡ್ಡಿ. ಅಣ್ಣನ ಸೋಲಿಸಲು ಪತ್ನಿಯನ್ನು ಕಣಕ್ಕಿಳಿಸಿದ್ದಾರೆ. ಸೋಮಶೇಖರ ರೆಡ್ಡಿ ವಿರುದ್ಧ ಜನಾರ್ದನ ರೆಡ್ಡಿ‌ (Janardhan Reddy) ಹೆಂಡತಿ ಅರುಣಾ ಲಕ್ಷ್ಮಿ ಸೆಣಸಲಿದ್ದಾರೆ. ಇದನ್ನೂ ಓದಿ: ಜನಾರ್ದನ ರೆಡ್ಡಿ ಚಲನವಲನದ ಮೇಲೆ ಗುಪ್ತಚರ ಇಲಾಖೆ ಕಣ್ಣು

ಬಿಜೆಪಿಗೆ ಸೆಡ್ಡು ಹೊಡೆದು ಕರ್ನಾಟಕ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿರುವ ಜನಾರ್ದನ ರೆಡ್ಡಿ, ಕಲ್ಯಾಣ ಕರ್ನಾಟಕ ಟಾರ್ಗೆಟ್ ಮಾಡಿಕೊಂಡಿದ್ದಾರೆ. ತಮ್ಮ ಹೊಸ ಪಕ್ಷ ಹುಟ್ಟು ಹಾಕಿದ್ದರೂ ಅಣ್ಣ ಸೋಮಶೇಖರ ರೆಡ್ಡಿ ಬಿಜೆಪಿಯಲ್ಲೇ ಇದ್ದಾರೆ. ಇಂಥ ಸಂದರ್ಭದಲ್ಲೇ ಅಣ್ಣನ ವಿರುದ್ಧವೇ ಯುದ್ಧ ಸಾರಿದ್ದಾರೆ ಗಾಲಿ ರೆಡ್ಡಿ. ತಮ್ಮ ಹಾಗೂ ತಮ್ಮನ ಹೆಂಡತಿಯ ಚಾಲೆಂಜ್ ಅನ್ನು ಸೋಮಶೇಖರ್ ರೆಡ್ಡಿ ಸ್ವೀಕರಿಸಿದ್ದಾರೆ.

ಅಣ್ಣನ ಹಣಿಯಲು ತಮ್ಮನ ಸ್ಕೆಚ್: ಬಳ್ಳಾರಿ ಜನ ಇದು ಯಾಕೋ ನಂಬಲಾಗುತ್ತಿಲ್ಲ ಅನ್ನುತ್ತಿದ್ದಾರೆ. ಕಾಂಗ್ರೆಸ್ ವೋಟ್ ಒಡೆಯಲು ಜನಾರ್ದನ ರೆಡ್ಡಿ ಹೂಡಿದ ತಂತ್ರವಾ ಇದು ಅಂತ ಮಾತಾಡಿಕೊಳ್ತಿದ್ದಾರೆ. ಈ ರೀತಿ ಹತ್ತು ಹಲವು ರಾಜಕೀಯ ಲೆಕ್ಕಾಚಾರ ಹಾಕುತ್ತಿದ್ದಾರೆ. ಒಂದು ವೇಳೆ ಅಣ್ಣನ ಸೋಲಿಸಲೆಂದೇ ಪತ್ನಿಯನ್ನು ಕಣಕ್ಕಿಳಿಸಿದ್ದೇ ಆದರೆ, ಬಳ್ಳಾರಿ ಅಖಾಡ ಇನ್ನಷ್ಟು ರಂಗೇರೋದಂತೂ ಗ್ಯಾರೆಂಟಿ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *