ನಗರಸಭೆಗೂ ತಟ್ಟಿದ ಗ್ರಹಣದ ಎಫೆಕ್ಟ್: ಕೆಲಸಕ್ಕೆ ಸಿಬ್ಬಂದಿ ರಜೆ

Public TV
0 Min Read

ಚಾಮರಾಜನಗರ: ಕಂಕಣ ಸೂರ್ಯ ಗ್ರಹಣದ ಎಫೆಕ್ಟ್ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ನಗರಸಭೆಗೂ ತಟ್ಟಿದ್ದು, ನಗರಸಭೆಯ ಬಹುತೇಕ ಸದಸ್ಯರು ಹಾಗೂ ಸಿಬ್ಬಂದಿ ಕೆಲಸಕ್ಕೆ ರಜೆ ಹಾಕಿದ್ದಾರೆ.

ನಗರಸಭೆ ಕಛೇರಿಯ ಸಿಬ್ಬಂದಿ ಕುರ್ಚಿಗಳು ಖಾಲಿಯಾಗಿತ್ತು. ಬಹುತೇಕ ಸಿಬ್ಬಂದಿ ರಜೆ ಹಾಕಿದ್ದು, ನಗರಸಭೆಗೆ ಕೆಲಸದ ನಿಮಿತ್ತ ಬಂದ ಸಾರ್ವಜನಿಕರಿಗೆ ಸೇವೆ ಸಿಗದೆ ಪರದಾಡಿದ್ದಾರೆ. ಗ್ರಹಣಕ್ಕೆ ಹೆದರಿ ಅಧಿಕಾರಿಗಳು ಕೆಲಸಕ್ಕೆ ಬಾರದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಂದ ದಾರಿಗೆ ಸುಂಕವಿಲ್ಲವೆಂಬಂತೆ ವಾಪಸ್ ತೆರಳಿದ್ದಾರೆ.

ಸರ್ಕಾರಿ ನೌಕರರು ಕೂಡ ಮೌಢ್ಯತೆಗೆ ಹೆದರಿ ಕಚೇರಿಗೆ ರಜೆ ಹಾಕಿರುವುದು ಎಷ್ಟು ಸರಿ? ನಮ್ಮ ಕೆಲಸ ಯಾವುದೂ ಆಗುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *