ಮನೆಯಲ್ಲಿ ಅಡಗಿ ಕುಳ್ತಿದ್ದ ಕರಿನಾಗರ ರಕ್ಷಣೆ

Public TV
1 Min Read

ಹಾವೇರಿ: ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ಮನೆಯೊಂದರಲ್ಲಿ ಅಡಗಿ ಕುಳಿತ ಕರಿನಾಗರ ಹಾವನ್ನ ರಕ್ಷಣೆ ಮಾಡಲಾಗಿದೆ.

ಯಮನಪ್ಪ ಮಾದರ ಮನೆಯಲ್ಲಿ ಹಾವು ಅಡಗಿ ಕುಳಿತಿತ್ತು. ಇವರ ಹಾನಗಲ್ ಡಿಪೋದ ಚಾಲಕನಾಗಿದ್ದು, ಮನೆಯಲ್ಲಿ ಹಾವು ಕಂಡ ತಕ್ಷಣ ಗಾಬರಿಯಾಗಿದ್ದಾರೆ. ಅದೇ ಡಿಪೋದಲ್ಲಿ ಕೆಲಸ ಮಾಡುವ ಚಾಲಕ ಕಂ ಸ್ನೇಕ್ ಕೃಷ್ಣರೆಡ್ಡಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ.

ಮಾಹಿತಿ ತಿಳಿದು ಮನೆಗೆ ಬಂದ ಕೃಷ್ಣರೆಡ್ಡಿ ಮನೆಯಲ್ಲಿ ಅಡಗಿ ಕುಳಿತಿದ್ದ ಕರಿನಾಗರವನ್ನು ಹಿಡಿದಿದ್ದಾರೆ. ಈ ಕರಿನಾಗರ ಹಾವನ್ನು ನೋಡಲು ಅಪಾರ ಜನರು ಬಂದಿದ್ದರು. ನಂತರ ಕೃಷ್ಣರೆಡ್ಡಿ ಸುರಕ್ಷಿತವಾಗಿ ಹಾವನ್ನು ಅರಣ್ಯಕ್ಕೆ ಬಿಟ್ಟಿದ್ದಾರೆ.

ಈಗಾಗಲೇ ಸ್ನೇಕ್ ಕೃಷ್ಣರೆಡ್ಡಿ ಚಾಲಕ ಕೆಲಸ ಮಾಡುತ್ತಾ, ಬಿಡುವಿನ ವೇಳೆಯಲ್ಲಿ ಹಾವುಗಳನ್ನ ಹಿಡಿದು ಕಾಡಿಗೆ ಬಿಡುವ ಕಾರ್ಯ ಮಾಡುತ್ತಿದ್ದಾರೆ. ಇದುವರೆಗೂ ಸುಮಾರು 2000ಕ್ಕೂ ಅಧಿಕ ಹಾವುಗಳನ್ನ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಈ ಕಾರ್ಯಕ್ಕೆ ಹಾನಗಲ್ ಪಟ್ಟಣ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *