ರಾತ್ರಿ ಸುರಿದ ಮಳೆಗೆ ಮನೆಗೆ ಎಂಟ್ರಿ ಕೊಟ್ಟ ವಿಶೇಷ ಅತಿಥಿ!

Public TV
1 Min Read

ಬೆಂಗಳೂರು: ಶನಿವಾರ ರಾತ್ರಿ ಸುರಿದ ಮಳೆಗೆ ಆಶ್ರಯ ಅರಸಿ ವಿಶೇಷ ಅತಿಥಿಯೊಂದು ಮನೆಯೊಳಗೆ ಸೇರಿಕೊಂಡ ಘಟನೆ ಆನೇಕಲ್ ತಾಲೂಕಿನ ಗುಡ್ನಹಳ್ಳಿಯಲ್ಲಿ ನಡೆದಿದೆ.

ಆನೇಕಲ್ ತಾಲೂಕಿನ ಗುಡ್ನಹಳ್ಳಿಯಲ್ಲಿ ಶನಿವಾರ ರಾತ್ರಿ ಮಳೆರಾಯನ ಆರ್ಭಟ ಜೋರಾಗಿಯೇ ಇತ್ತು. ಈ ವೇಳೆ ಗುಡ್ನಹಳ್ಳಿ ನಿವಾಸಿ ಮುನಿಯಪ್ಪ ಅವರ ಮನೆಯಲ್ಲಿ ಹಾವೊಂದು ಪ್ರತ್ಯಕ್ಷವಾಗಿದೆ. ರಾತ್ರಿ ಸುಮಾರು 7ರಿಂದ 9 ಗಂಟೆಯವೆರೆಗೂ ಮಳೆ ಸುರಿದಿದ್ದು, ಮಳೆಯಿಂದ ಆಶ್ರಯ ಪಡೆಯಲು ಹಾವು ಮನೆಗೆ ನುಗ್ಗಿದೆ.

ಮನೆಗೆ ನುಗ್ಗಿದ್ದ ಹಾವನ್ನು ಕಂಡ ಮನೆ ಮಾಲೀಕರು ಭಯಗೊಂಡಿದ್ದು, ತಕ್ಷಣ ಉರಗ ತಜ್ಞ ಮಾಯಸಂದ್ರ ಸೂರಿ ಅವರಿಗೆ ಮಾಹಿತಿ ತಿಳಿಸಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಬಳಿಕ ಉರಗ ತಜ್ಞರು ಹಾವನ್ನು ಸೆರೆಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟುಬಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *