– ಕಾಂಗ್ರೆಸ್ ಪಕ್ಷದ ಪಂಚಾಯಿತಿ ಅಧ್ಯಕ್ಷೆಯಿಂದಲೇ ಲೆಟರ್ ಬಾಂಬ್
ಬೆಂಗಳೂರು: ʻಬಡವರ ದುಡ್ಡು ತಿಂದ್ರೇ ಹುಳ ಬೀಳುತ್ತೆ, ಬಡವರ ದುಡ್ಡು ತಿಂದ್ರೆ ದೇವ್ರು ಮೆಚ್ಚುತ್ತಾನಾ? ಹೀಗೆ ನಿನ್ನೆ ವೆರೈಟಿ ವೆರೈಟಿ ಡೈಲಾಗ್ ಹೊಡೆದ್ರು ಸಚಿವ ಜಮೀರ್ ಅಹಮ್ಮದ್ (Zameer Ahmed Khan). ಆದ್ರೆ ಅವ್ರ ಇಲಾಖೆಯಲ್ಲೇ ದಿನಕ್ಕೊಂದು ಗೋಲ್ಮಾಲ್ ಸರ್ಕಾರವನ್ನು ಈಗ ಮುಜಗರಕ್ಕೆ ಸಿಲುಕಿದೆ.
ರಾಜೀವ್ ಗಾಂಧಿ ವಸತಿ ನಿಗಮದ ಬಳಿಕ ಈಗ ಸ್ಲಂ ಬೋರ್ಡ್ನಲ್ಲೂ (Slum Board) ಅಕ್ರಮದ ವಾಸನೆ ಕಂಡುಬಂದಿದೆ. ಯಲಹಂಕದಲ್ಲಿ ಸ್ಲಂ ಬೋರ್ಡ್ನಿಂದ (Yelahanka Slum Board) ಮಂಜೂರಾಗಿರುವ ನಿವೇಶನ ಬಡವರಿಗೆ ಸಿಗ್ತಿಲ್ಲ, ಬದಲಾಗಿ ದುಡ್ಟು ಕೊಟ್ಟವರಿಗೆ ಸೈಟು ಕೊಡ್ತಿದ್ದಾರೆ ಅಂತ ಕಾಂಗ್ರೆಸ್ ಪಕ್ಷದ ಪಂಚಾಯಿತಿ ಅಧ್ಯಕ್ಷೆಯೊಬ್ಬರು ಗಂಭೀರ ಆರೋಪ ಮಾಡಿ ಸಿಎಂ, ಡಿಸಿಎಂಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಸರಿ ಮಾತಾಡ್ಸಲ್ಲ ಅಂತ ರಾಜು ಕಾಗೆ ಆರೋಪ – ಶಾಸಕರಿಗೆ ನಮ್ಮ ಮೇಲೆ ಪ್ರೀತಿ ಜಾಸ್ತಿ ಎಂದ ಡಿಕೆಶಿ
ಈ ಗೋಲ್ಮಾಲ್ನಲ್ಲಿ ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಬಡವರಿಗೆ ಸೇರಬೇಕಾಗಿರುವ ಮನೆ ನಿವೇಶನ ದುಡ್ಡಿದ್ದವರ ಪಾಲಾಗಿದೆ. ಹಣ ಕೊಟ್ಟವರಿಗೆ ನಿವೇಶನ ಸೇಲ್ ಮಾಡಲಾಗುತ್ತಿದೆ ಅಂತ ಪತ್ರದಲ್ಲಿ ಆರೋಪಿಸಿದ್ದು, ಅನರ್ಹ ಫಲಾನುಭವಿಗಳ ಪಟ್ಟಿ ತಡೆಹಿಡಿಯುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: PUBLiC TV Impact | ಅಳಿವಿನಂಚಿನಲ್ಲಿದ್ದ ಸರ್ಕಾರಿ ಶಾಲೆಗೆ `ಪಬ್ಲಿಕ್’ ಪ್ರೋತ್ಸಾಹ – ಸರ್ಕಾರಿ ಶಾಲೆಗೆ ಹೆಚ್ಚಾಯ್ತು ಡಿಮ್ಯಾಂಡ್
ಒಟ್ಟಿನಲ್ಲಿ ಸರ್ಕಾರದ ವಿರುದ್ಧ ಸಾಲು ಸಾಲು ಸ್ಕ್ಯಾಮ್ ಗಳು, ಅವರದ್ದೇ ಪಕ್ಷದವರು ಈ ಭ್ರಷ್ಟಾಚಾರದ ವಿರುದ್ಧ ತಿರುಗಿಬಿದ್ದು ಬುದ್ಧಿ ಕಲಿಸುವ ಮಟ್ಟಕ್ಕೆ ಬಂದಿದೆ. ಇದನ್ನೂ ಓದಿ: ಬಹಿರಂಗ ಹೇಳಿಕೆ ನೀಡುವ ಶಾಸಕರೇ ಹುಷಾರ್! ಕಾಂಗ್ರೆಸ್ ಹೈಕಮಾಂಡ್ ವಾರ್ನಿಂಗ್ ಕಾಲ್?