ತಮ್ಮನ ಸಾವಿನ ಸುದ್ದಿ ತಿಳಿದು ನೇಣಿಗೆ ಶರಣಾದ ಅಕ್ಕ

Public TV
1 Min Read

ಹಾವೇರಿ: ತಮ್ಮನ ಸಾವಿನ ಸುದ್ದಿ ತಿಳಿದು ಮನೆಗೆ ಬಂದು ಅಕ್ಕನೂ ಆತ್ಮಹತ್ಯೆಗೆ ಶರಣಾದ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣದ ವಿನಾಯಕ ನಗರದಲ್ಲಿ ನಡೆದಿದೆ.

ನಾಗರಾಜ್ ಚಲವಾದಿ(16), ಭಾಗ್ಯಶ್ರೀ(18) ಮೃತರಾಗಿದ್ದಾರೆ. ಸರಿಯಾಗಿ ಶಾಲೆಗೆ ಹೋಗು ಅಂದಿದ್ದಕ್ಕೆ ಬಾಲಕ ನೇಣಿಗೆ ಶರಣಾಗಿದ್ದನು. ತಮ್ಮ ಸಾವಿಗೆ ಸುದ್ದಿ ಕೇಳಿ ಅಕ್ಕನೂ ನೇಣಿಗೆ ಶರಣಾಗಿದ್ದು, ಸಾವಿನಲ್ಲೂ ಅಕ್ಕ, ತಮ್ಮ ಒಂದಾಗಿದ್ದಾರೆ.

ಸರಿಯಾಗಿ ಶಾಲೆಗೆ ಹೋಗು ಅಂದಿದ್ದಕ್ಕೆ ಮನೆಯ ಮೇಲಿನ ಕೊಠಡಿಯಲ್ಲಿ ಬಾಲಕ ನಾಗರಾಜ್ ನೇಣಿಗೆ ಶರಣಾಗಿದ್ದಾನೆ. ತಮ್ಮನ ಸಾವಿನ ಸುದ್ದಿ ಕೇಳಿದ ಭಾಗ್ಯಶ್ರೀ ಮನೆಗೆ ಬಂದು ಅದೇ ಕೊಠಡಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇಬ್ಬರ ಮರಣೋತ್ತರ ಪರೀಕ್ಷೆ ನಂತರ ಅಕ್ಕ ತಮ್ಮನ ಅಂತ್ಯಕ್ರಿಯೆ ಕುಟುಂಬಸ್ಥರು ನೆರವೇರಿಸಿದ್ದಾರೆ. ಇದನ್ನೂ ಓದಿ: ಒಳ್ಳೆ ಬುದ್ಧಿ ಕಲಿಯಿರಿ ಎಂದಿದ್ದಕ್ಕೆ ಸಾಮಾಜಿಕ ಕಾರ್ಯಕರ್ತನ ಕೊಲೆಗೈದ ಬಾಲಕರು!

ಬೆಳಿಗ್ಗೆ ನಾಗರಾಜ್ ಮೃತಪಟ್ಟಿದ್ದು, ನಾಗರಾಜನ ಸಾವಿನ ಸುದ್ದಿ ತಿಳಿದು 12 ಗಂಟೆಗೆ ಅಕ್ಕ ಬಾಗ್ಯಶ್ರೀ ಮೃತಪಟ್ಟಿದ್ದಾಳೆ. ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಅಕ್ಕ ತಮ್ಮ ಸಾವಿಗೆ ಈಡೀ ಬ್ಯಾಡಗಿ ಪಟ್ಟಣದ ಜನರು ಹಾಗೂ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.

Share This Article
Leave a Comment

Leave a Reply

Your email address will not be published. Required fields are marked *