ಕಾಫಿನಾಡ ಸಿರಿ ಕನ್ಯೆ ಮುಂದೆ ಪ್ರವಾಸಿಗರ ಫೋಟೋ ಶೂಟ್

Public TV
1 Min Read

ಚಿಕ್ಕಮಗಳೂರು: ಹೊಸ ವರ್ಷ ಸ್ವಾಗತಿಸಲು ಪ್ರವಾಸಿಗರು ಕಾಫಿ ನಾಡಿಗೆ ಜಮಾಯಿಸಿದ್ದ ಪ್ರವಾಸಿಗರು ಕಾಫಿನಾಡ ಸಿರಿ ಕನ್ಯೆ ಮುಂದೆ ಫೋಟೋ ಶೂಟ್ ಮೂಲಕ ಎಂಜಾಯ್ ಮಾಡಿದ್ದಾರೆ.

ದೂರದ ಊರುಗಳಿಂದ ಕುಟುಂಬ ಸಮೇತರಾಗಿ ಬಂದಿದ್ದ ಪ್ರವಾಸಿಗರು, ಮಕ್ಕಳ ಜೊತೆ ವಿವಿಧ ಭಂಗಿಯಲ್ಲಿ ಫೋಟೋ ತೆಗೆದುಕೊಂಡು ಸಂತಸಪಟ್ಟರು. ಕಾಫಿನಾಡಿನ ಗಿರಿ ಭಾಗದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠಕ್ಕೆ ಹೋಗುವ ದಾರಿಯಲ್ಲಿ ಈ ಸಿರಿ ಕನ್ಯೆ ಸಿಗುತ್ತಾಳೆ. ದಾರಿ ಮಧ್ಯೆಯೇ ಸಿಗುವ ಈ ಕನ್ಯೆ ಬಳಿ ಫೋಟೋ ತೆಗೆಸಿಕೊಂಡು, ಕಾಫಿನಾಡಿನ ಕಾಫಿ ರುಚಿ ಸವಿದು ಪ್ರವಾಸಿಗರು ಮುಂದೆ ಸಾಗುತ್ತಾರೆ.

ಚಿಕ್ಕಮಗಳೂರಿನಿಂದ ಐದು ಕಿ.ಮೀ. ದೂರದಲ್ಲಿರೋ ಈ ಸಿರಿ ಕಾಫಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಮಹಿಳೆಯೊಬ್ಬರು ಮಲಗಿಕೊಂಡಿರುವ ಪ್ರತಿಮೆ ದಾರಿ ಹೋಕರನ್ನು ಮೂಕ ವಿಸ್ಮಿತರನ್ನಾಗಿಸುತ್ತಿದೆ. ಮಕ್ಕಳೊಂದಿಗೆ ಬಂದ ಪೋಷಕರು ಹಾಗೂ ಸ್ನೇಹಿತರು ಹೊಸ ವರ್ಷದ ಆಚರಣೆಗೂ ಮುನ್ನ ಈ ಕನ್ಯೆ ಬಳಿ ಸ್ವಲ್ಪ ಹೊತ್ತು ಕಾಲ ಕಳೆದು ಹೋದರು. ಮಕ್ಕಳನ್ನು ಆಡಲು ಬಿಟ್ಟು ಸಿರಿ ಕನ್ಯೆ ಮುಂದೆ ಫೋಟೋ ಶೂಟ್‍ಗೆ ನಡೆಸಿಕೊಂಡಿದ್ದಾರೆ.

ಗಿರಿ ಭಾಗದ ಪ್ರವಾಸಿಗರಿಗೆ ಪೊಲೀಸ್ ಇಲಾಖೆ ಸಂಜೆ 6 ಗಂಟೆ ವರೆಗೆ ಮಾತ್ರ ಡೆಡ್ ಲೈನ್ ನೀಡಲಾಗಿತ್ತು. ಆರು ಗಂಟೆಯ ಬಳಿಕ ಯಾವುದೇ ಪ್ರವಾಸಿಗರನ್ನು ಗಿರಿಭಾಗಕ್ಕೆ ಬಿಡುವುದಿಲ್ಲ. ಹೀಗಾಗಿ ಬೆಳಗ್ಗೆಯಿಂದಲೇ ಪ್ರವಾಸಿಗರು ಹೊಸವರ್ಷದ ಆಚರಣೆಯಲ್ಲಿ ತೊಡಗಿದ್ದರು. ಸಂಜೆ ಈ ಸಿರಿ ಕನ್ಯೆ ಬಳಿ ಕಾಲ ಕಳೆದು, ಕಾಫಿ ಕುಡಿದು ಹಿಂದಿರುಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *