ʻಒಂದು ಕುಟುಂಬ, ಒಂದು ಸರ್ಕಾರಿ ಕೆಲಸʼ – ನೀತಿಯನ್ನು ಎತ್ತಿ ಹಿಡಿದ ಹೈಕೋರ್ಟ್‌

Public TV
2 Min Read

ಗ್ಯಾಂಗ್ಟಾಕ್: ಸಿಕ್ಕಿಂ ರಾಜ್ಯ ಸರ್ಕಾರದ ʻಒಂದು ಕುಟುಂಬ – ಒಂದು ಸರ್ಕಾರಿ ಕೆಲಸʼ ಯೋಜನೆಯನ್ನು ಸಿಕ್ಕಿಂ ಹೈಕೋರ್ಟ್ ಎತ್ತಿಹಿಡಿದಿದೆ. ಯೋಜನೆಯ ಸತ್ಯಾಸತ್ಯತೆಗಳ ಬಗ್ಗೆ ಯಾವುದೇ ಸಂದೇಹವಿಲ್ಲ, ಇದು ನಾಗರಿಕರಿಗೆ ಪ್ರಯೋಜನಕಾರಿಯಾಗಿದೆ ಎಂದು ಹೇಳಿದೆ.

ಮಾಜಿ ಮುಖ್ಯಮಂತ್ರಿ ಪವನ್ ಚಾಮ್ಲಿಂಗ್ ಅವರು ಪ್ರಾರಂಭಿಸಿದ ಈ ಯೋಜನೆಯಡಿ 13,000 ಕ್ಕೂ ಹೆಚ್ಚು ನಾಗರಿಕರು ಉದ್ಯೋಗ ಪಡೆದಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿ ಬಿಸ್ವನಾಥ್ ಸೋಮದ್ದರ್ ಮತ್ತು ನ್ಯಾಯಮೂರ್ತಿ ಮೀನಾಕ್ಷಿ ಮದನ್ ರೈ ಅವರ ವಿಭಾಗೀಯ ಪೀಠ ಗಮನಿಸಿದೆ. ಇದನ್ನೂ ಓದಿ: ಸ್ಥಳಾಂತರವಾಗಲು ಬಯಸುವ ಕಾಶ್ಮೀರಿ ಪಂಡಿತರಿಗೆ ಮಹಾರಾಷ್ಟ್ರದ ಬಾಗಿಲು ಯಾವಾಗ್ಲೂ ತೆರೆದಿರುತ್ತದೆ: ಆದಿತ್ಯ ಠಾಕ್ರೆ

Law

ಸಿಕ್ಕಿಂ ರಾಜ್ಯದಲ್ಲಿ ನೆಲೆಸಿರುವ 13,000ಕ್ಕೂ ಹೆಚ್ಚು ನಾಗರಿಕರು ಈ ಪ್ರಕ್ರಿಯೆಯಲ್ಲಿ ಉದ್ಯೋಗ ಪಡೆದಿದ್ದಾರೆ. ಒಂದು ಕುಟುಂಬಕ್ಕೆ ಒಂದು ಉದ್ಯೋಗ ಒದಗಿಸುವ ಈ ನೀತಿಯು ಸದುದ್ಧೇಶ ಹೊಂದಿದೆ. ಹಾಗಾಗಿ ಸಿಕ್ಕಿಂ ಸರ್ಕಾರಿ ಸೇವಾ ನಿಯಮ-1974ರ ಅಡಿಯಲ್ಲಿ ಒದಗಿಸಲಾದ ತಾಂತ್ರಿಕತೆಗಳ ಆಧಾರದ ಮೇಲೆ ಈ ಹಂತದಲ್ಲಿ ಯೋಜನೆಯ ಪ್ರಯೋಜನಕಾರಿ ಸ್ವರೂಪವನ್ನು ಅನುಮಾನಿಸಲಾಗುವುದಿಲ್ಲ ಮತ್ತು ಪರಿಶೀಲಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಇದನ್ನೂ ಓದಿ: 20 ಮಂದಿಯ ರಾಜೀನಾಮೆಯ ಬೆನ್ನಲ್ಲೇ ನೂತನ ಸಚಿವ ಸಂಪುಟ ರಚನೆ- 13 ಮಂದಿ ಪ್ರಮಾಣವಚನ

ಸಿಕ್ಕಿಂ ರಾಜ್ಯದ ಆಡಳಿತ ಸುಧಾರಣೆ ಮತ್ತು ತರಬೇತಿ ಇಲಾಖೆಯ ಜಂಟಿ ಕಾರ್ಯದರ್ಶಿ ಉಮೇಶ್ ಸುನಮ್ ಅವರು ತಮ್ಮ ರಾಜ್ಯದ 31 ಕ್ಷೇತ್ರಗಳ ಪ್ರವಾಸಗಳನ್ನು ಪೂರ್ಣಗೊಳಿಸಿದ ನಂತರ ಮಾಜಿ ಮುಖ್ಯಮಂತ್ರಿ (ಸಿಎಂ) ಅವರು ಈ ಯೋಜನೆಯನ್ನು ಪ್ರಾರಂಭಿಸಿದ್ದಾರೆ ಎಂದು ಮನವಿ ಸಲ್ಲಿಸಲಾಗಿತ್ತು. ಈ ಪ್ರವಾಸದ ಸಮಯದಲ್ಲಿ, ಸಿಕ್ಕಿಂ ಜನರ ಮುಖ್ಯ ಕುಂದುಕೊರತೆ ಸರ್ಕಾರಿ ಸೇವೆಯಲ್ಲಿ ಉದ್ಯೋಗದ ಕೊರತೆ ಎಂದು ಗಮನಿಸಲಾಗಿದೆ ಎಂದು ಪೀಠವು ಗಮನಿಸಿತು.

court order law

ಅಲ್ಲದೆ, ಅಂದಿನ ಸರ್ಕಾರವು ಸರ್ಕಾರಿ ಸೇವೆಯಲ್ಲಿ ಯಾವುದೇ ಕುಟುಂಬ ಸದಸ್ಯರನ್ನು ಹೊಂದಿರದ ಅರ್ಜಿದಾರರ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು ಎಂದು ಅಂದಿನ ಸರ್ಕಾರ ನಿರ್ಧರಿಸಿದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.‌ ಈ ಪ್ರಶ್ನೆಯು ಯೋಜನೆಯ ಪರಿಕಲ್ಪನೆಗೆ ಕಾರಣವಾಗಿದೆ ಎಂದು ಹೇಳಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಈದ್ಗಾ ಮೈದಾನ ವಿವಾದ- ಗ್ರೌಂಡ್‍ನಲ್ಲಿ ಹಿಂದೂ ಸಂಘಟನೆಯ ಮುಖಂಡರ ಹೈಡ್ರಾಮಾ

ಈ ಅಫಿಡವಿಟ್ ನಲ್ಲಿ 1974ರ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸದಿದ್ದರೂ ತಾಂತ್ರಿಕ ಅವಶ್ಯಕತೆಗಳನ್ನು ಅನುಸರಿಸಿದೆ. ಆದರೂ ಈ ಪ್ರಕ್ರಿಯೆಯಲ್ಲಿ ಸರ್ಕಾರ ಶಾಸನ ಬದ್ಧ ಕಾನೂನು ಮತ್ತು ನಿಯಮಗಳಿಗೆ ಕಟ್ಟುನಿಟ್ಟಾಗಿ ಪಾಲಿಸಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ನಿರ್ಧರಿಸಲಾಗಿದೆ. ಇದರೊಂದಿಗೆ ಮುಂದೆ ಜನ ಕಲ್ಯಾಣ ಹಾಗೂ ಪ್ರಯೋಜನಕಾರಿ ಯೋಜನೆಗಳನ್ನು ರಾಜ್ಯ ಹಾಗೂ ಏಜೆನ್ಸಿಗಳು ಜಾರಿಗೆ ತರಲು ನ್ಯಾಯಾಲಯ ಸಲಹೆ ನೀಡಿದೆ.

Law

ಅರ್ಜಿದಾರರ ಪರ ಹಿರಿಯ ವಕೀಲ ಎ. ಮೌಲಿಕ್, ವಕೀಲರಾದ ಕೆ.ಡಿ.ಭುಟಿಯಾ ಮತ್ತು ರಂಜಿತ್ ಪ್ರಸಾದ್ ವಾದ ಮಂಡಿಸಿದರು. ಅಡ್ವೊಕೇಟ್ ಜನರಲ್ ವಿವೇಕ್ ಕೊಹ್ಲಿ, ಸರ್ಕಾರಿ ವಕೀಲರಾದ ವೈಡಬ್ಲ್ಯೂ ರಿಂಚೆನ್ ಮತ್ತು ಪೆಮಾ ಭುಟಿಯಾ ಅವರು ರಾಜ್ಯ ಅಧಿಕಾರಿಗಳನ್ನು ಪ್ರತಿನಿಧಿಸಿದರು.

Share This Article
1 Comment

Leave a Reply

Your email address will not be published. Required fields are marked *