ಸಿದ್ದರಾಮಯ್ಯ ಮುಂದೆ ಪ್ರಧಾನಿ ಆದ್ರೂ ಆಗ್ಬೋದು – ಯಾದಗಿರಿ ಕೆಂಚಪ್ಪ ಪೂಜಾರಿ ಭವಿಷ್ಯ

Public TV
1 Min Read

– ವರ್ಷದ ಹಿಂದೆಯೇ ಸಿದ್ದರಾಮಯ್ಯ ಸಿಎಂ ಆಗ್ತಾರೆ ಎಂದು ಭವಿಷ್ಯ ನುಡಿದಿದ್ದ ಮಾಲಹಳ್ಳಿ ಮಾಳಿಂಗರಾಯ

ಯಾದಗಿರಿ: 2ನೇ ಬಾರಿಗೆ ಸಿದ್ದರಾಮಯ್ಯನವರು (Siddaramaiah) ರಾಜ್ಯದ ಮುಖ್ಯಮಂತ್ರಿಯಾಗಿ ಶನಿವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಒಂದು ವರ್ಷದ ಹಿಂದೆ ಸಿದ್ದರಾಮಯ್ಯ ಸಿಎಂ ಆಗ್ತಾರೆ ಎಂದು ಯಾದಗಿರಿ (Yadgir) ಜಿಲ್ಲೆಯ ಸುರಪುರ ತಾಲೂಕಿನ ಮಾಲಹಳ್ಳಿ ಮಾಳಿಂಗರಾಯ ದೇವಸ್ಥಾನದ (Malahalli Malingaraya Temple) ಅರ್ಚಕ ಕೆಂಚಪ್ಪ ಪೂಜಾರಿ ಭವಿಷ್ಯ ನುಡಿದಿದ್ದರು. ಈಗ ಸಿದ್ದರಾಮಯ್ಯ ಸಿಎಂ ಆಗ್ತಿರುವುದರಿಂದ ಮಾಲಹಳ್ಳಿ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಇದನ್ನೂ ಓದಿ: ಇಂಥದ್ದು ಬೇಕು ಅಂದ್ರೆ ಪಡೆಯಲೇಬೇಕು ಎನ್ನೋ ಹಠ: ಡಿಕೆಶಿ ಬಗ್ಗೆ ಸೋದರತ್ತೆ ಮಾತು

ಸಿದ್ದರಾಮಯ್ಯ ಅಭಿಮಾನಿಗಳು ಮಾಳಿಂಗರಾಯ ದೇವಸ್ಥಾನದ ಗರ್ಭಗುಡಿಯೊಳಗೆ ಸಿದ್ದರಾಮಯ್ಯ ಫೋಟೋ ಇಟ್ಟು ವಿಶೇಷ ಪೂಜೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಅಭಿಮಾನಿಗಳು ಜೈಕಾರ ಹಾಕಿದ್ದಾರೆ. ಇದನ್ನೂ ಓದಿ: ಸಿಇಟಿ ಪರೀಕ್ಷೆ ದಿನವೇ ಪ್ರಮಾಣವಚನ – ಮೋದಿ ರ‍್ಯಾಲಿ ಇರೋವಾಗ ಮಾತ್ರ ನಿಮ್ಗೆ ವಿದ್ಯಾರ್ಥಿಗಳು ಕಾಣೋದ?: ಬಿಎಲ್ ಸಂತೋಷ್

ನಂತರ ಮಾತನಾಡಿದ ಕೆಂಚಪ್ಪ ಪೂಜಾರಿ, ಗುರು ಮಾಳಿಂಗರಾಯನ ಆಜ್ಞೆಯಂತೆ ಸಿದ್ದರಾಮಯ್ಯ ಸಿಎಂ ಆಗ್ತಿದ್ದಾರೆ. ಗುರುವಿನ ವಾಣಿಯಂತೆ ನಾನು ನುಡಿದಿದ್ದೆ. ಅದು ಸ್ವತಃ ಮಾಳಿಂಗರಾಯ ನುಡಿದ ಆಜ್ಞೆ. ಮುಂದೆ ಸಿದ್ದರಾಮಯ್ಯ ಪ್ರಧಾನ ಮಂತ್ರಿ ಆದ್ರೂ ಆಗಬಹುದು ಎಂದು ಸಿದ್ದರಾಮಯ್ಯ ಅವರ ರಾಜಕೀಯ ಬೆಳವಣಿಗೆ ಕುರಿತು ಮತ್ತೊಂದು ಭವಿಷ್ಯ ನುಡಿದಿದ್ದಾರೆ.

Share This Article