ದ್ವೇಷ, ಷಡ್ಯಂತ್ರ ಮಾಡಿದ್ದಿದ್ರೆ ಇಷ್ಟೊತ್ತಿಗೆ ಸಿದ್ದರಾಮಯ್ಯ ಜೈಲಿಗೆ ಸೇರಬೇಕಿತ್ತು: ಮುನಿರತ್ನ

Public TV
1 Min Read

ಕೋಲಾರ: ಇಡಿ ದಾಳಿ ವೈಯಕ್ತಿಕ ದ್ವೇಷ ಅಥವಾ ಷಡ್ಯಂತ್ರ ಎನ್ನುವ ಹಾಗಿದ್ದರೆ ಇಷ್ಟೊತ್ತಿಗೆ ಸಿದ್ದರಾಮಯ್ಯ (Siddaramaiah) ಜೈಲಿನಲ್ಲಿರಬೇಕಿತ್ತು ಎಂದು ಡಿಕೆಶಿಗೆ ತೋಟಗಾರಿಕೆ ಸಚಿವ ಮುನಿರತ್ನ (Munirathna) ತಿರುಗೇಟು ನೀಡಿದರು.

ಮಾಲೂರು ಪಟ್ಟಣದಲ್ಲಿ ಮೋದಿ ಹುಟ್ಟು ಹಬ್ಬದ ಪ್ರಯುಕ್ತ ಬಿಜೆಪಿ ಮುಖಂಡ ಹೂಡಿ ವಿಜಯ್ ಕುಮಾರ್ ನೇತೃತ್ವದಲ್ಲಿ ಆಯೋಜನೆ ಮಾಡಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್‌ಗೆ (DK Shivakumar) ಇಡಿ (ED) ಬುಲಾವ್ ವಿಚಾರ ಪ್ರಕರಣ ಏನಾಗುತ್ತೆ ಅನ್ನೋದು ಗೊತ್ತಿಲ್ಲ, ಆದರೆ ಕಾನೂನಿನಲ್ಲಿ ಏನು ಅವಕಾಶ ಇರುತ್ತದೆಯೋ ಅದೇ ಆಗುತ್ತದೆ. ಇದರಲ್ಲಿ ಷಡ್ಯಂತ್ರ ಎನ್ನುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.

ಷಡ್ಯಂತ್ರ ಮಾಡುವುದಾಗಿದ್ದರೇ ಸಿದ್ದರಾಮಯ್ಯ ಮೇಲೆ ಏಕೆ ದಾಳಿ ಮಾಡಿಲ್ಲ. ಸಿದ್ದರಾಮಯ್ಯನವರಿಗೆ ಯಾಕೆ ಇಡಿ ನೋಟಿಸ್ ಕೊಟ್ಟಿಲ್ಲ. ವೈಯಕ್ತಿಕ ದ್ವೇಷ ಎನ್ನುವ ಹಾಗಿದ್ದರೆ ಸಿದ್ದರಾಮಯ್ಯ ಅವರನ್ನು ಇಷ್ಟೊತ್ತಿಗೆ ಜೈಲಿಗೆ ಹಾಕಬೇಕಿತ್ತು ಎಂದರು. ಇದನ್ನೂ ಓದಿ: ಮೋದಿ ಹುಟ್ಟುಹಬ್ಬ – ಬೆಂಗಳೂರಿನಲ್ಲಿ ವಿಶಿಷ್ಟ ಸರ್ಕಾರಿ ಆಸ್ಪತ್ರೆ ಲೋಕಾರ್ಪಣೆ

Congress

ಇನ್ನು ಇದೆ ವೇಳೆ ಸಿದ್ದರಾಮಯ್ಯ ರಾಜ್ಯ ಪ್ರವಾಸ ವಿಚಾರ ಅವರ ಪಕ್ಷದ ವಿಚಾರ ನಮಗ್ಯಾಕೆ, ಅದು ನಮ್ಮ ಪಕ್ಷಕ್ಕೆ ಸಂಬಂಧ ಇಲ್ಲ, ಅವರ ಯಾತ್ರೆಯಿಂದ ನಮಗೇನು ತೊಂದರೆ ಇಲ್ಲ ನಮ್ಮ ಕ್ಷೇತ್ರವೂ ಭಾರತದಲ್ಲೇ ಇದೆ ಮಾಡಲಿ ಬಿಡಿ ಎಂದರು. ಇದನ್ನೂ ಓದಿ: ಸಂಘ ಪರಿವಾರದಿಂದಾಗಿ ಕರ್ನಾಟಕದಲ್ಲಿ ಪ್ರಗತಿಪರ ಚಳುವಳಿಗೆ ಹಿನ್ನಡೆ: ಕೇರಳ ಸಿಎಂ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *