ಕುಮಾರಸ್ವಾಮಿ ಮಾತು ವೇದವಾಕ್ಯ ಅಲ್ಲ: ಸಿದ್ದರಾಮಯ್ಯ

Public TV
1 Min Read

– ಕುಮಾರಸ್ವಾಮಿಗೆ ಮಾತಿಗೆ ಕಿಮ್ಮತ್ತು ಕೊಡುವ ಹಂಗಿಲ್ಲ

ಹುಬ್ಬಳ್ಳಿ: ಸಿದ್ದರಾಮಯ್ಯ ಮತ್ತು ಎಚ್‍ಡಿಕೆ ಜಟಾಪಟಿ ಮುಂದುವರಿದಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅಲ್ಪಸಂಖ್ಯಾತರಿಗೆ ಮೋಸ ಮಾಡುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ಈ ಬೆನ್ನಲ್ಲೆ ಸಿದ್ದರಾಮಯ್ಯ ಎಚ್‍ಡಿಕೆ ವಿರುದ್ಧ ಹರಿಹಾಯ್ದಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆ ಸೋಮಾರಿಗಳ ಮಾಡುವ ಯೋಜನೆ ಅನ್ನೋ ಎಚ್‍ಡಿಕೆ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ. ಅದು ಹೊಟ್ಟೆ ತುಂಬಿದವರು ಹೇಳುವ ಹೇಳಿಕೆ. ಹಸಿವು ಯಾರು ಅನುಭವಿಸಿದವರು ಮತ್ತು ಹಸಿದವರು ಎಂದು ಹೀಗೆ ಮಾತನಾಡಲ್ಲ. ಕುಮಾರಸ್ವಾಮಿ ಮಾತು ವೇದವಾಕ್ಯ ಅಲ್ಲ. ಬಡವರು ಹೇಳಿದರೆ ಅದು ಬೇರೆ. ಕುಮಾರಸ್ವಾಮಿಗೆ ಮಾತಿಗೆ ಕಿಮ್ಮತ್ತು ಕೊಡುವ ಹಂಗಿಲ್ಲ ಎಂದು ಎಚ್‍ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನಿಮ್ಮ ಅಂತ್ಯಕಾಲವೂ ಆರಂಭವಾಗಿದೆ – ಸಿದ್ದರಾಮಯ್ಯ ವಿರುದ್ಧ ಹೆಚ್‍ಡಿಕೆ ಟ್ವೀಟ್ ವಾರ್

ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಜಗಳ ನಿಂತಿಲ್ಲ. ಸಿದ್ದರಾಮಯ್ಯ ವಿರುದ್ಧ ಪುಟಗೋಸಿ ಪದ ಬಳಸಿದ್ದ ಕುಮಾರಸ್ವಾಮಿ ಈಗ ರಾಜಕೀಯ ನರಮೇಧ ಮತ್ತು ಕಿರಾತಕ ಪದ ಬಳಸಿದ್ದಾರೆ. ಕಾಲ ಚಕ್ರ ತಿರುತ್ತಿದೆ, ನಿಮ್ಮ ಅಂತ್ಯಕಾಲವೂ ಸನ್ನಿಹಿತವಾಗಿದೆ. ನಿಮ್ಮ ನಿಜ ಬಣ್ಣ ಗೊತ್ತಾಗುತ್ತಿದೆ. ತೊಟ್ಟಿಲು ತೂಗಿ, ಮಗು ಚಿವುಟುತ್ತಾ ಕತ್ತನ್ನೂ ಕುಯ್ಯುತ್ತಾ ನಡೆಸುತ್ತಿರುವ ಇಂಥ ನೀಚ ರಾಜಕಾರಣ ಎಂದು ಸಿದ್ದರಾಮಯ್ಯ ವಿರುದ್ಧ ಟ್ವೀಟ್ ಮಾಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕೋಟಿಗೊಬ್ಬ-3 ಸಿನಿಮಾ ವಿತರಕರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಸೂರಪ್ಪ ಬಾಬು

Share This Article
Leave a Comment

Leave a Reply

Your email address will not be published. Required fields are marked *