ಮತ್ತೇ ರಾಜಕೀಯದಲ್ಲಿ ಸಕ್ರಿಯರಾಗಿ: ಮಾಜಿ ಸಿಎಂರನ್ನು ಹುರಿದುಂಬಿಸಿದ ಕುರುಬ ಸಮುದಾಯದ ಮುಖಂಡರು

Public TV
1 Min Read

ಮಂಗಳೂರು: ಸರ್ ನೀವು ಯಾವುದೇ ಒತ್ತಡಗಳಿಗೆ ಒಳಗಾಗಬೇಡಿ, ನಿಮ್ಮೊಂದಿಗೆ ಇಡಿ ಕುರುಬ ಸಮುದಾಯವೇ ಇದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕುರುಬ ಸಮುದಾಯದ ಜನರು ಧೈರ್ಯ ತುಂಬಿದ್ದಾರೆ.

ಮಂಗಳೂರಿನ ಕುರುಬ ಸಂಘದ ಭವನಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರಿಗೆ ಸಾಂತ್ವಾನ ಹೇಳಲು ಅನೇಕ ಜನರು ನೆರೆದಿದ್ದರು. ಕಳೆದ ಐದು ವರ್ಷದಿಂದ ನಾವು ಕುರುಬರು ಅಂತಾ ಹೇಳಿಕೊಂಡು ರಾಜ್ಯದಲ್ಲಿ ಹೆಮ್ಮೆಯಿಂದ ಜೀವನ ಮಾಡಿದ್ದೇವೆ. ರಾಜಕೀಯದಲ್ಲಿ ನಾವು ಸುಮ್ಮನೆ ಕುರಬಾರದು, ಮತ್ತೇ ನಮ್ಮನ್ನು ಕಂಡರೆ ಭಯ ಬರಬೇಕು. ನಿಮ್ಮ ಹಿಂದೆ ನಾವು ಸದಾ ಇರುತ್ತೇವೆ ಎಂದು ಸಮುದಾಯದ ಜನರು ಸಿದ್ದರಾಮಯ್ಯ ಅವರನ್ನು ಹುರಿದುಂಬಿಸಿದರು.

ಬಾದಾಮಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಯ ಮುಖಂಡರು ಮಂಗಳೂರಿನ ಕುರುಬ ಸಂಘದ ಭವನಕ್ಕೆ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ನಾನು ಈಗ ಖಾಸಗಿ ಕಾರ್ಯಕ್ರಮದಲ್ಲಿ ಇರುವೆ. ಹೀಗಾಗಿ ಏನು ಹೇಳುಬೇಕಿದೆಯೋ ಅದನ್ನು ಬೆಂಗಳೂರಿಗೆ ಬಂದು ಹೇಳುತ್ತೇನೆ ಎಂದು ಗರಂ ಆದರು.

Share This Article
Leave a Comment

Leave a Reply

Your email address will not be published. Required fields are marked *