ವೇದಿಕೆಯಲ್ಲಿ ಒಂದೇ ಹಣ್ಣು ಹಂಚಿಕೊಂಡು ತಿಂದ ಸಿದ್ದರಾಮಯ್ಯ, ಹೆಚ್.ವಿಶ್ವನಾಥ್

Public TV
1 Min Read

ರಾಯಚೂರು: ಕಾಂಗ್ರೆಸ್ (Congress) ತೊರೆದ ಬಳಿಕ ಸಿದ್ದರಾಮಯ್ಯ (Siddaramaiah) ಅವರಿಂದ ಅಂತರ ಕಾಯ್ದುಕೊಂಡಿದ್ದ ಮಾಜಿ ಸಚಿವ, ಎಂಎಲ್‌ಸಿ ಹೆಚ್.ವಿಶ್ವನಾಥ್ (H.Vishwanath) ರಾಯಚೂರಿನ (Raichuru) ದೇವದುರ್ಗದ ತಿಂಥಣಿಯಲ್ಲಿ ನಡೆಯುತ್ತಿರುವ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮದ ವೇದಿಕೆಯಲ್ಲಿ ಅಕ್ಕಪಕ್ಕ ಕುಳಿತು ಉಭಯ ಕುಶಲೋಪರಿ ವಿಚಾರಿಸಿದರಲ್ಲದೇ, ಒಂದೇ ಹಣ್ಣನ್ನ ಹಂಚಿಕೊಂಡು ತಿಂದರು.

ಬುಧವಾರವಷ್ಟೇ ಕಾಂಗ್ರೆಸ್ ನನ್ನ ರಕ್ತ, ನಾನು ಕಾಂಗ್ರೆಸ್‌ಗೆ ಹೋಗುತ್ತೇನೆ ಅಂತ ಹೇಳಿಕೆ ನೀಡಿದ್ದ ಹೆಚ್.ವಿಶ್ವನಾಥ್ ಇಂದು ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ. ವೇದಿಕೆಯಲ್ಲಿ ಪಕ್ಕದಲ್ಲೇ ಕುಳಿತಿದ್ದ ಸಿದ್ದರಾಮಯ್ಯ ಹೆಚ್.ವಿಶ್ವನಾಥ್‌ಗೆ ತಮ್ಮ ಕೈಯಲ್ಲಿದ್ದ ಅರ್ಧ ಪೇರಲ ಹಣ್ಣು ಕೊಟ್ಟರು. ಕಾರ್ಯಕ್ರಮದಲ್ಲಿ ಸತೀಶ್ ಜಾರಕಿಹೊಳಿ, ಹೆಚ್.ಎಂ.ರೇವಣ್ಣ ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದರು‌. ಇದನ್ನೂ ಓದಿ: ಸಿದ್ದರಾಮಯ್ಯ ಕೋಲಾರದಲ್ಲಿ ನಿಂತರೆ ಸೋಲುತ್ತಾರೆ: ಸಿಎಂ ಇಬ್ರಾಹಿಂ ಭವಿಷ್ಯ

ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಷಣದ ವೇಳೆ ಯುವಕನೋರ್ವ ಸ್ಪೀಕರ್ ಮೇಲೆ ಏರಿ ಕುಳಿತು ಸಿದ್ದರಾಮಯ್ಯಗೆ ಕೈ ಮುಗಿಯುವ ಮೂಲಕ ಗಮನ ಸೆಳೆದ ಘಟನೆ ನಡೆಯಿತು.‌ ಅಭಿಮಾನಿಯ ಹುಚ್ಚಾಟ ಕಂಡು ಗರಂ ಆದ ಸಿದ್ದರಾಮಯ್ಯ ಕೆಳಗಡೆ ಇಳಿಯುವಂತೆ ಯುವಕನಿಗೆ ಗದರಿದರು.

ಸಿದ್ದರಾಮಯ್ಯ ಬೈದರೂ ಯುವಕ ಕೈ ಮುಗಿಯುತ್ತಲೇ ಕುಳಿತಿದ್ದ. ಅವನನ್ನ ಯಾರೂ ನೋಡಬೇಡಿ.. ಭಾಷಣ ಕೇಳಿ ಅಂತಾ ಸಿದ್ದರಾಮಯ್ಯ ಹೇಳಿದ್ದಕ್ಕೆ ಕೆಲಕಾಲ ನೆರೆದಿದ್ದ ಜನ ನಗೆಗಡಲಲ್ಲಿ‌ ತೇಲಿದ್ದರು. ಬಳಿಕ ಯುವಕನನ್ನ ಪೊಲೀಸರು ಕೆಳಗೆ ಇಳಿಸಿದರು. ಇದನ್ನೂ ಓದಿ: ಸುಮಲತಾ ಅಂಬರೀಶ್‌ಗೆ ಬಿಜೆಪಿ ಪಕ್ಷ ಸೇರ್ಪಡೆ ಆಹ್ವಾನ ನೀಡಿದ್ದೇವೆ: ಅಶ್ವಥ್ ನಾರಾಯಣ

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *