ಅರ್ಜುನ್ ಆಪ್ತನ ವಿರುದ್ಧ ದೂರು ನೀಡಿದ್ದು ಯಾಕೆ: ಸ್ಪಷ್ಟನೆ ನೀಡಿದ ಶೃತಿ ಹರಿಹರನ್

Public TV
1 Min Read

ಬೆಂಗಳೂರು: ಬಹುಭಾಷಾ ನಟ ಅರ್ಜುನ್ ಸರ್ಜಾ ಆಪ್ತ ಪ್ರಶಾಂತ್ ಸಂಬರ್ಗಿ ವಿರುದ್ಧ ನೀಡಿದ್ದ ದೂರಿನ ಬಗ್ಗೆ ನಟಿ ಶೃತಿ ಹರಿಹರನ್ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ್ದಾರೆ.

ಪಬ್ಲಿಕ್ ಟಿವಿಯೊಂದಿಗೆ ದೂರವಾಣಿಯಲ್ಲಿ ಪ್ರತಿಕ್ರಿಯಿಸಿದ ಅವರು, ಪ್ರಾಣ ಬೆದರಿಕೆ ಹಾಗೂ ತೇಜೋವಧೆಗೆ ಸಂಬಂಧಿಸಿದಂತೆ ನಟ ಅರ್ಜುನ್ ಸರ್ಜಾ ಆಪ್ತ ಪ್ರಶಾಂತ್ ಸಂಬರ್ಗಿ ವಿರುದ್ಧ ಹೈ-ಗ್ರೌಂಡ್ಸ್ ಠಾಣೆಯಲ್ಲಿ ದೂರನ್ನು ನೀಡಿದ್ದೇನೆ. ಶೂಟಿಂಗ್ ನಿಮಿತ್ತ ನಾನು ಚೆನ್ನೈಗೆ ಆಗಮಿಸಿದ್ದು, ಇಂದು ಬೆಂಗಳೂರಿಗೆ ಬರಲು ಆಗುವುದಿಲ್ಲ. ಶನಿವಾರ ಬೆಂಗಳೂರಿಗೆ ವಾಪಸ್ಸಾಗುತ್ತೇನೆ ಎಂದು ತಿಳಿಸಿದರು.

ನನ್ನ ಸ್ನೇಹಿತನಾದ ರಾಮ್, ಪ್ರಶಾಂತ್ ಸೇರಿದಂತೆ ಇತರೆ ಯಾರ ವಿರುದ್ಧವೂ ದೂರನ್ನು ನೀಡುವುದಿಲ್ಲ. ರಾಮ್ ದೂರು ನೀಡುತ್ತಾರೆ ಎಂಬುದು ಶುದ್ಧ ಸುಳ್ಳು. ನಾನು ಇದುವರೆಗೂ ಒಂದೇ ಒಂದು ದೂರನ್ನು ಮಾತ್ರ ನೀಡಿದ್ದೇನೆ. ಅವರು ಪಬ್ಲಿಕ್ ಟಿವಿಯಲ್ಲಿ ನನ್ನ ವಿರುದ್ಧ ಮಾತನಾಡಿದ್ದಕ್ಕೆ, ನಾನು ದೂರನ್ನು ನೀಡಿದ್ದೇನೆ. ಸದ್ಯದ ಪರಿಸ್ಥಿತಿಯಲ್ಲಿ ನಾನು ಯಾವುದೇ ರೀತಿಯ ಹೇಳಿಕೆಗಳನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.

ಪ್ರಶಾಂತ್ ವಿರುದ್ಧ ದೂರನ್ನು ನೀಡಿರುವುದಕ್ಕೆ ನನ್ನ ಬಳಿ ಎಲ್ಲಾ ಸಾಕ್ಷಿಗಳಿವೆ. ಕಾನೂನಿನ ಮೂಲಕ ನಾನು ಹೋರಾಟ ಮಾಡ್ಬೇಕು, ಅದಕ್ಕೆಲ್ಲಾ ತಯಾರಿ ಮಾಡಿದ್ದೀನಿ ಎಂದು ಸ್ಪಷ್ಟ ಪಡಿಸಿದ್ರು.  ಇದನ್ನೂ ಓದಿ: #MeToo ಬ್ಯಾಟಲ್‍ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್- ಪ್ರಶಾಂತ್ ವಿರುದ್ಧ ಶೃತಿ ಮತ್ತೊಂದು ದೂರು

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=pqnp-LBxMcc

Share This Article
Leave a Comment

Leave a Reply

Your email address will not be published. Required fields are marked *