ಶ್ರೀರಾಮನ ಕುರಿತು ಅಸಭ್ಯ ಪೋಸ್ಟ್ – ವಾಯ್ಸ್ ಆಫ್ ಮುಸ್ಲಿಂ ಪೇಜ್ ವಿರುದ್ಧ ಕೇಸ್

Public TV
1 Min Read

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಶ್ರೀರಾಮನ ಕುರಿತು ಅಸಭ್ಯವಾಗಿ ಪೋಸ್ಟ್ ಮಾಡಿದ್ದಕ್ಕೆ ವಾಯ್ಸ್ ಆಫ್ ಕರ್ನಾಟಕ ಮುಸ್ಲಿಂ ಹೆಸರಿನಲ್ಲಿದ್ದ ಪೇಜ್ ವಿರುದ್ಧ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀರಾಮ ಕಳ್ಳ, ಕುಡುಕ, ಹೆಂಡತಿಯನ್ನು ತೃಪ್ತಿಪಡಿಸಲಾಗದವನು, ಪತ್ನಿಯನ್ನು ಕಾಡಿಗೆ ಬಿಟ್ಟ ನಪುಂಸಕ ಎಂದು ಪೋಸ್ಟ್ ಪ್ರಕಟವಾಗಿತ್ತು. ಈ ಪೋಸ್ಟ್‍ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ವಕೀಲರಾದ ಮೀರಾ ರಾಘವೇಂದ್ರ ಅವರು ದೂರು ನೀಡಿದ್ದು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

https://www.facebook.com/VoiceOfKarnatakaMuslim/photos/a.1732362953462606/1818018408230393/?type=3&theater

ಪೋಸ್ಟ್‍ನಲ್ಲಿ ಏನಿದೆ?
ರಾಮ ಒಬ್ಬ ಕಳ್ಳ, ಕುಡುಕ, ಹೆಂಡತಿಯನ್ನು ತೃಪ್ತಿ ಪಡಿಸಲು ಆಗದೇ ಕಾಡಿನಲ್ಲಿ ಬಿಟ್ಟ ನಪುಂಸಕ. ಸಲಿಂಗಕಾಮಿ ಇವನ ಹೆಸರಲ್ಲಿ ಹತ್ಯೆ ನಡೆಯುತ್ತದೆ ಎಂದರೆ ಇವನು ಭಯೋತ್ಪಾದಕನಲ್ಲದೆ ಇನ್ಯಾರು? ರಾಮ ದೇವು ಆಗಿದ್ದರೆ ಈಗ ಬರಲಿ, ಅಥವಾ ರಾಮ ದೇರು ಪ್ರೂ ಮಾಡಿ. ಪೋಸ್ಟ್ ಮಾಡುವೆ.

ರಾಮ ಹೋ ರಾಮ ಎಲ್ಲಿದ್ಯಪ್ಪ? ನಿನ್ನ ಹೆಸರಿನಲ್ಲಿ ಅಧುನಿಕ ರಾಮ ಭಕ್ತ ಭಯೋತ್ಪಾದಕರು. ಕೊಲೆ ಮಾಡುತ್ತಿದ್ದಾರಪ್ಪ ತಾಖತ್ ಇದ್ರೆ ಈಗ ಬಾ. ರಾಮ ಮೆಜೆಸ್ಟಿಕ್ ಮಾಮ ಎಂದು ಬರೆದು ಪೋಸ್ಟ್ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *