ಇಂದು ಶ್ರೀಲಂಕಾ ಪ್ರಧಾನಿ ಕೊಲ್ಲೂರಿಗೆ ಭೇಟಿ

Public TV
1 Min Read

ಮಂಗಳೂರು: ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡಲೆಂದು ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಇಂದು ಮಂಗಳೂರಿಗೆ ಆಗಮಿಸಿದ್ದಾರೆ.

ಶ್ರೀಲಂಕಾದಿಂದ ಬಜ್ಪೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಸಿಂಘೆ, ಬುಲೆಟ್ ಪ್ರೂಫ್ ಅಂಬಾಸಿಡರ್ ಕಾರಿನಲ್ಲಿ ರಸ್ತೆಯ ಮೂಲಕ ಮಂಗಳೂರು ನಗರಕ್ಕೆ ಆಗಮಿಸಿದರು. ಪತ್ನಿ ಮೈತ್ರಿ ವಿಕ್ರಮ ಸಿಂಘೆ ಜೊತೆಗೆ ಜಿಲ್ಲಾಧಿಕಾರಿ ಕಚೇರಿ ಬಳಿಯ ಗೇಟ್ ವೇ ತ್ರೀ ಸ್ಟಾರ್ ಹೊಟೇಲ್ ನಲ್ಲಿ ಕೆಲಕಾಲ ತಂಗಿದ್ರು.

ಬಳಿಕ ಅಲ್ಲಿಯೇ ಬೆಳಗ್ಗಿನ ಉಪಹಾರ ಸೇವಿಸಿದ ಪ್ರಧಾನಿ ದಂಪತಿ, ಚಹಾದ ಜೊತೆಗೆ ಮಂಗಳೂರು ಭಾಗದ ಸಾಂಪ್ರದಾಯಿಕ ಉಪಾಹಾರ ನೀರುದೋಸೆ ಮತ್ತು ಚಟ್ನಿ ಸೇವಿಸಿದ್ರು. ನಂತರ ಹೊಟೇಲ್ ನಿಂದ ಬಜ್ಪೆ ವಿಮಾನ ನಿಲ್ದಾಣಕ್ಕೆ ತೆರಳಿ, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಕೊಲ್ಲೂರಿಗೆ ತೆರಳಿದ್ರು.

ಮಧ್ಯಾಹ್ನ 3 ಗಂಟೆಗೆ ಮತ್ತೆ ಇದೇ ಗೇಟ್ ವೇ ಹೊಟೇಲಿಗೆ ಆಗಮಿಸಲಿದ್ದು, ಊಟಕ್ಕೆ ಕಾಣೆ ಮೀನಿನ ಸ್ಪೆಷಲ್ ಮೀಲ್ ರೆಡಿ ಮಾಡೋಕೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

 

Share This Article
Leave a Comment

Leave a Reply

Your email address will not be published. Required fields are marked *