ಮೃತ ಬಿಜೆಪಿ ಮುಖಂಡ ಅನ್ವರ್ ಸಹೋದರ ಕಬೀರ್ ಹೇಳೋದು ಹೀಗೆ

Public TV
1 Min Read

ಚಿಕ್ಕಮಗಳೂರು: ಶಾಸಕ ಸಿ.ಟಿ. ರವಿ ಆಪ್ತ ಹಾಗೂ ಚಿಕ್ಕಮಗಳೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನ್ವರ್ ಅವರ ಕೊಲೆಗೆ ಸುಪಾರಿ ನೀಡಲಾಗಿತ್ತು ಎಂದು ಮೃತ ಅನ್ವರ್ ಸಹೋದರ ಕಬೀರ್ ಆರೋಪಿಸಿದ್ದಾರೆ.

ಅನ್ವರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸಿಫ್ ಹಾಗೂ ಯುಸೂಫ್ ಹಾಜಿ ಎಂಬವರ ವಿರುದ್ಧ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಕಬೀರ್ ದೂರು ದಾಖಲಿಸಿದ್ದಾರೆ.

ಅನ್ವರ್ ಸಹೋದರ ಕಬೀರ್ ಹೇಳಿದ್ದೇನು?
ಸುಮಾರ ಎಂಟು ವರ್ಷದ ಬಿಜೆಪಿ ಮುಖಂಡ ಅನ್ವರ್ ಮೇಲೆ ಯೂಸಫ್ ಹಾಜಿ ಮಗ ಮನ್ಸೂರ್, ಬದ್ರು, ಫಾರುಕ್, ಉಸ್ಮಾನ್ ಮತ್ತು ರಫೀಕ್ ಎಂಬವರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಹಲ್ಲೆ ವೇಳೆ ಅನ್ವರ್ ಕಾಲನ್ನು ಕತ್ತರಿಸಿದ್ದರು. ಮಾರಣಾಂತಿಕ ಹಲ್ಲೆ ಪ್ರಕರಣ ಸಂಬಂಧ ಜಿಲ್ಲಾ ನ್ಯಾಯಾಲಯದಲ್ಲಿ ಆರು ತಿಂಗಳು ವಿಚಾರಣೆ ನಡೆಯಿತು. ನಂತರ ಜಿಲ್ಲಾ ನ್ಯಾಯಾಲಯ ಹುಸೇನ್ ಮತ್ತು ಮನ್ಸೂರ್‍ಗೆ ಎರಡು ವರ್ಷ, ಉಳಿದವರಿಗೆ ಆರು ತಿಂಗಳ ಜೈಲು ಶಿಕ್ಷೆ ಘೋಷಿಸಿತ್ತು.

ಜಿಲ್ಲಾ ನ್ಯಾಯಲಯದ ತೀರ್ಪನ್ನು ಪ್ರಶ್ನಿಸಿ ಎಲ್ಲರೂ ಹೈಕೋರ್ಟ್ ಮೊರೆ ಹೋಗಿದ್ದರು. ಆದ್ರೆ ಅಲ್ಲಿಯೂ ನ್ಯಾಯ ನಮ್ಮ ಪರವಾಗಿಯೇ ಸಿಕ್ಕಿತ್ತು. ಪಟ್ಟು ಬಿಡದ ಅವರು ದ್ವಿಸದಸ್ಯ ಪೀಠ ನ್ಯಾಯಾಲಯಕ್ಕೆ ಮೊರೆ ಹೋದರು. ಅಲ್ಲಿಯೂ ತೀರ್ಪು ನಮ್ಮ ಪರವಾಗಿತ್ತು. ಜೈಲಿನಲ್ಲಿ ಇದ್ದುಕೊಂಡೆ ಆಸಿಫ್ ಹಾಗೂ ಯುಸೂಫ್ ಅನ್ವರ್ ಅನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು.

ನಿನ್ನನ್ನು ಕೊಲೆ ಮಾಡುತ್ತೇವೆ ಅಂತಾ ಒಂದು ತಿಂಗಳ ಹಿಂದಷ್ಟೇ ಮನ್ಸೂರ್ ಬೆದರಿಕೆ ಹಾಕಿದ್ದನು. ಅಲ್ಲದೇ ಎಲ್ಲರೂ ಜೈಲಿನಲ್ಲಿದ್ದೇ ದ್ವೇಷ ಸಾಧನೆಗೆ ಸಂಚು ರೂಪಿಸಿದ್ದು, ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆ ಎಂದು ಮೃತ ಅನ್ವರ್ ಸಹೋದರ ಕಬೀರ್ ಆರೋಪಿಸಿದ್ದಾರೆ.

https://youtu.be/VkV71CeyVDw

Share This Article
Leave a Comment

Leave a Reply

Your email address will not be published. Required fields are marked *