ಉಗ್ರರ ದಾಳಿ ಸ್ಥಳದಲ್ಲೇ ಮಾರ್ಟಿನ್ ಸಿನಿಮಾ ಶೂಟಿಂಗ್ ನಡೆದಿತ್ತು, ಆಗ ಸೆಕ್ಯೂರಿಟಿ ಚೆನ್ನಾಗಿತ್ತು: ಧ್ರುವ ಸರ್ಜಾ

Public TV
1 Min Read

– ಟೆರರಿಸ್ಟ್‌ಗಳಿಗೆ ಬಾಸ್ಟರ್ಡ್ ಎಂದ ನಟ

ಏ.22 ರಂದು ಜಮ್ಮು ಮತ್ತು ಕಾಶ್ಮೀರದ (Jammu Kashmir) ಪಹಲ್ಗಾಮ್‌ನಲ್ಲಿ (Pahalgam) ನಡೆದ ಉಗ್ರರ ದಾಳಿಯ ಕುರಿತು ನಟ ಧ್ರುವ ಸರ್ಜಾ  (Dhruva Sarja) ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ದಾಳಿ ನಡೆದ ಸ್ಥಳದಲ್ಲೇ ಮಾರ್ಟಿನ್ ಚಿತ್ರೀಕರಣ ನಡೆದಿತ್ತು. ಆದರೆ ಆಗ ಸೆಕ್ಯೂರಿಟಿ ಚೆನ್ನಾಗಿತ್ತು. ಈಗ ಈ ದಾಳಿ ನಡೆಸಿರೋ ಬಾಸ್ಟರ್ಡ್‌ಗಳ  ಬಗ್ಗೆ ಏನು ಮಾತಾಡೋದು? ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: ನಮ್ಮ ಧರ್ಮ ಯಾರನ್ನ ಕೊಲ್ಲಲೂ ಅನುಮತಿಸಲ್ಲ – ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮಕ್ಕೆ ಮುಸ್ಲಿಮರ ಒತ್ತಾಯ

ಟೆರರಿಸ್ಟ್‌ಗಳಿಗೆ ಬಾಸ್ಟರ್ಡ್ ಎಂದು ಬೈದು ಮಾತನಾಡಿದ ಅವರು, ಆ ಬಾಸ್ಟರ್ಡ್‌ಗಳ ಬಗ್ಗೆ ಮಾತಾಡೋಕೆ ಏನಿದೆ? ಅವರಿಗೆ ಅರ್ಥ ಆಗುವ ಭಾಷೆಯಲ್ಲೇ ನಮ್ಮ ಭಾರತೀಯ ಸೇನೆ ಉತ್ತರ ಕೊಟ್ಟೆ ಕೊಡುತ್ತಾರೆ. ಈಗ ಸಿಂಧೂ ನೀರನ್ನು ಬಂದ್ ಮಾಡಿದ್ದಾರೆ. ನಮ್ಮ ಭಗವತ್ ಗೀತೆಯಲ್ಲೇ ಇದೆ ತಾಳ್ಮೆಯಿಂದ ಇರಬೇಕು ಅಂತ, ಬೇಗ ಉತ್ತರ ಕೊಡುತ್ತಾರೆ, ದೇವರ ರೂಪದಲ್ಲಿ ಇಂಡಿಯನ್ ಆರ್ಮಿ ಶಿಕ್ಷೆ ಕೊಡುತ್ತಾರೆ ಎಂದಿದ್ದಾರೆ.

ಈ ಕುರಿತು ಮೋದಿಯವರು ಮುಂದೆ ಯಾವ ನಿರ್ಧಾರ ತೆಗೆದುಕೊಳಬಹುದು ಎಂದ ಪ್ರಶ್ನೆಗೆ, ನಾನು ಮೋದಿಯವರ ಪಿಎ ನಾ? ಫ್ಯಾಮಿಲಿ ನೋಡುತ್ತಿರುತ್ತಾರೆ, ನಮ್ಮ ಬಾಯಲ್ಲಿ ಬೇರೆ ರೀತಿ ಮಾತು ಬಂದರೆ ತಪ್ಪಾಗುತ್ತದೆ. ಇದನ್ನು ಡೈವರ್ಟ್ ಮಾಡೋದು ಬೇಡ, ಯಾವತ್ತಿದ್ದರೂ ಜಮ್ಮು ಮತ್ತು ಕಾಶ್ಮೀರ ನಮ್ಮ ಕಿರೀಟ. ನಾವು ಇನ್ನು ಯುದ್ಧ ಪ್ರಾರಂಭ ಮಾಡಿಲ್ಲ ಅಷ್ಟೇ ಎಂದು ಹೇಳಿದ್ದಾರೆ.ಇದನ್ನೂ ಓದಿ: ಪಾಕ್ ಪ್ರಜೆಗಳನ್ನು ಕಳುಹಿಸಲು ಕೇಂದ್ರದಿಂದ ಅಡ್ವೈಸರಿ, ಪತ್ತೆಹಚ್ಚಲು ಎಸ್‌ಪಿಗಳಿಗೆ ಸೂಚನೆ: ಪರಮೇಶ್ವರ್

Share This Article