ಶಿವಮೊಗ್ಗ: ಹುತ್ತದ ಒಳಗಿದ್ದ ನಾಗರಹಾವನ್ನು ಹೊರಗೆಳೆದು ನುಂಗಿದ ಕಾಳಿಂಗ ಸರ್ಪ

Public TV
1 Min Read

ಶಿವಮೊಗ್ಗ: ಕಾಳಿಂಗ ಸರ್ಪವೊಂದು ಹುತ್ತದ ಒಳಗೆ ಅವಿತಿದ್ದ ನಾಗರಹಾವನ್ನು ಹೊರಗೆ ಎಳೆದು ನುಂಗಿದ ಘಟನೆ ಶಿವಮೊಗ್ಗದಲ್ಲಿ ನಡೆದಿದ್ದು, ಈ ದೃಶ್ಯ ಸ್ಥಳೀಯರ ಕುತೂಹಲಕ್ಕೆ ಕಾರಣವಾಯ್ತು.

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ನಗರ ಹೋಬಳಿಯ ಮುಂಡಳ್ಳಿ ಬಳಿ ಈ ಅಪರೂಪದ ದೃಶ್ಯ ಕಂಡುಬಂದಿದೆ. ಸುಮಾರು 13 ಅಡಿ ಉದ್ದದ ಕಾಳಿಂಗ ಸರ್ಪನಾಗರಹಾವೊಂದನ್ನು ಬೆನ್ನಟ್ಟಿ ಬಂದಿದೆ. ಕಾಳಿಂಗ ಸರ್ಪದಿಂದ ತಪ್ಪಿಸಿಕೊಳ್ಳಲು ನಾಗರಹಾವು ಹತ್ತಿರವಿದ್ದ ಹುತ್ತ ಸೇರಿದೆ. ಆದರೂ ಬಿಡಧೇ ಹುತ್ತದ ಒಳಗೆ ನುಗ್ಗಿ ನಾಗರಹಾವನ್ನು ಹೊರ ತಂದು ಕಾಳಿಂಗ ಸರ್ಪ ನುಂಗಲು ಆರಂಭಿಸಿತು. 10 ನಿಮಿಷದಲ್ಲಿ ಹಾವನ್ನು ಸಂಪೂರ್ಣ ನುಂಗಿ ಹಾಕಿತು.

ನಾಗರಹಾವನ್ನು ಬೆನ್ನಟ್ಟಿ ಬಂದು ಹುತ್ತ ಸೇರಿದ ಕಾಳಿಂಗ ಸರ್ಪವನ್ನು ಕಂಡು ಭಯಗೊಂಡ ಸ್ಥಳೀಯರು ಆಗುಂಬೆ ಮಳೆಕಾಡು ತಜ್ಞ ಅಜಯ್ ಗಿರಿಗೆ ಮಾಹಿತಿ ನೀಡಿದ್ದರು. ಉರಗತಜ್ಞ ಬರುವ ವೇಳೆಗೆ ಕಾಳಿಂಗ ಸರ್ಪ ನಾಗರಹಾವನ್ನು ಅರ್ಧದಷ್ಟು ನುಂಗಿಬಿಟ್ಟಿತ್ತು. ಪೂರ್ತಿ ನುಂಗಿದ ಮೇಲೆ ಕಾಳಿಂಗ ಸರ್ಪವನ್ನು ಸಮೀಪದ ಕಾಡಿಗೆ ಬಿಡಲಾಯಿತು.

 

Share This Article
Leave a Comment

Leave a Reply

Your email address will not be published. Required fields are marked *