ಶೋಭಾ ಮಾಡ್ತಿರೋದು ಪಕ್ಕಾ ವೋಟ್ ಪಾಲಿಟಿಕ್ಸ್: ಸಂಸದೆ ವಿರುದ್ಧ ಖಾದರ್ ಗರಂ

Public TV
1 Min Read

ಬೆಂಗಳೂರು: ಇಲ್ಲಿಯವರೆಗೆ ರಾಜ್ಯ ಮಟ್ಟದಲ್ಲಿ ಅವರ ಮಾನ ಹೋಗಿತ್ತು. ಇದೀಗ ತಪ್ಪು ಪತ್ರ ಬರೆದು ರಾಷ್ಟ್ರ ಮಟ್ಟದಲ್ಲಿ ಶೋಭಾ ಕರಂದ್ಲಾಜೆ ಮಯಾ9ದೆ ಹೋಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವ ಯುಟಿ ಖಾದರ್ ಹೇಳಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆ ಕಳುಹಿಸಿರುವ ಪತ್ರ ಪಕ್ಕಾ ಪೊಲಿಟಿಕಲ್ ಗಿಮಿಕ್ ಆಗಿದ್ದು, ಈ ಪತ್ರ ನೋಡಿದರೇನೆ ಅವರ ಮನಸ್ಥಿತಿ ಅನ್ನೋದು ಗೊತ್ತಾಗುತ್ತದೆ. ಇವೆಲ್ಲಾ ಓಟಿಗಾಗಿ ಮಾಡುತ್ತಿರುವ ಕೆಲಸ ಎಂದು ಅವರು ಹೇಳಿದರು.

ಕಾಂಗ್ರೆಸ್ ಸರಕಾರದ ಅವಧಿಯಲ್ಲಿ 23 ಹಿಂದುಗಳ ಹತ್ಯೆಯಾಗಿದೆ ಎಂದು ಆರೋಪಿಸಿ ಕೇಂದ್ರಕ್ಕೆ ಶೋಭಾ ಕರಂದ್ಲಾಜೆ ಕಳುಹಿಸಿರುವ ಪಟ್ಟಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸತ್ತವರನ್ನು ಬದುಕಿಸ್ತಾರೆ, ಬದುಕಿದವರನ್ನು ಪತ್ರದಲ್ಲೇ ಸಾಯಿಸುತ್ತಾರೆ ಎಂದು ಗರಂ ಆಗಿ ಉತ್ತರಿಸಿದರು.

ಅವರ ಪತ್ರದಲ್ಲಿ ವಿನಾಯಕ ಬಳಿಗಾ, ಹರೀಶ್ ಪೂಜಾರಿ, ಪ್ರವೀಣ್ ಪೂಜಾರಿ ಹತ್ಯೆಯಾಗಿದ್ದಾರೆ. ಆದ್ರೆ ಅವರ ಹೆಸರು ಸೇರಿಸಿಲ್ಲ. ಯಾಕೆ ಅವರು ದಕ್ಷಿಣ ಕನ್ನಡದವರು ಅಲ್ವಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಬದುಕಿದ್ದವರನ್ನು ಕೊಲೆ ಮಾಡಲಾಗಿದೆ ಎಂದು ಕೇಂದ್ರಕ್ಕೆ ಸುಳ್ಳು ವರದಿ ಕೊಟ್ಟ ಶೋಭಾ!

Share This Article
Leave a Comment

Leave a Reply

Your email address will not be published. Required fields are marked *