ಶಿವರಾತ್ರಿ ಸ್ಪೆಷಲ್ ತಂಬಿಟ್ಟು ರೆಸಿಪಿ

Public TV
1 Min Read

ಬ್ಬಗಳು ಬಂದರೆ ಸಾಕು ಮನೆಯಲ್ಲಿ ಸಿಹಿಯಾದ ಅಡುಗೆ, ದೇವರಿಗೆ ನೈವೇದ್ಯ ಮಾಡಬೇಕಾಗುತ್ತದೆ. ಇಂದು ಮಹಾಶಿವರಾತ್ರಿ (Maha Shivaratri), ಈ ದಿನ ರಾತ್ರಿಯಿಡೀ ಶಿವನಾಮ ಸ್ಮರಣೆ ಮಾಡಿ ಜಾಗರಣೆ ಮಾಡುತ್ತೀರಿ. ಶಿವನಿಗೆ ಪ್ರಿಯವಾದ ನೈವೇದ್ಯ ಎಂದರೆ ಅದು ತಂಬಿಟ್ಟು. ದೇವರಿಗೆ ನೈವೇದ್ಯ ಮಾಡಿಲ್ಲ ಅಂದರೆ ಶಿವರಾತ್ರಿ ಪೂರ್ಣವೇ ಆಗಲ್ಲ. ಹೀಗಾಗಿ ಮನೆಯಲ್ಲೆ ಸುಲಭ ರೀತಿಯಲ್ಲಿ ತಂಬಿಟ್ಟು (Tambittu) ಮಾಡುವ ವಿಧಾನ ನಿಮಗಾಗಿ.

ಬೇಕಾಗುವ ಸಾಮಾಗ್ರಿಗಳು
ಅಕ್ಕಿ – ಅರ್ಧ ಕೆಜಿ
ಎಳ್ಳು – 5-6 ಚಮಚ
ಕಡ್ಲೆಕಾಯಿ ಬೀಜ – 50 ಗ್ರಾಂ
ಹುರಿಗಡಲೆ – 50 ಗ್ರಾಂ
ಬೆಲ್ಲ – 1 ಅಚ್ಚು
ಕೊಬ್ಬರಿ ತುರಿ – 1 ಬಟ್ಟಲು
ಏಲಕ್ಕಿ – 2 ಇದನ್ನೂ ಓದಿ: ವಿಶೇಷ ದಿನಗಳಿಗಾಗಿ ಸಿಹಿ ಸಿಹಿ ಮಲಾಯಿ ಲಡ್ಡು ರೆಸಿಪಿ

ಮಾಡುವ ವಿಧಾನ
* ಒಂದು ಪ್ಯಾನ್‍ಗೆ ಅಕ್ಕಿ ಹಾಕಿ ಹುರಿದುಕೊಳ್ಳಿ. ತಣ್ಣಗಾದ ಮೇಲೆ ಬಳಿಕ ಮಿಕ್ಸರ್ ಜಾರ್ ಗೆ ಹಾಕಿ ಪುಡಿ ಮಾಡಿಕೊಳ್ಳಿ.
* ಅದೇ ಪ್ಯಾನ್‍ಗೆ ಕಡ್ಲೆಕಾಯಿ ಬೀಜ ಹಾಕಿ ಹುರಿದು ಸಿಪ್ಪೆ ತೆಗೆದು ಇಟ್ಟುಕೊಳ್ಳಿ.
* ಪ್ಯಾನ್‍ಗೆ ಎಳ್ಳು ಹಾಕಿ ಬೆಚ್ಚಗೆ ಮಾಡಿ.
* ಈಗ ಒಂದು ಮಿಕ್ಸರ್ ಜಾರ್ ಗೆ ಹುರಿಗಡಲೆ, ಕಡ್ಲೆಕಾಯಿ ಬೀಜ, ಏಲಕ್ಕಿ ಹಾಕಿ ತರಿತರಿ ರುಬ್ಬಿಕೊಳ್ಳಿ.
* ಒಂದು ಪ್ಯಾನ್ ಬಿಸಿಗಿಟ್ಟು ಅದಕ್ಕೆ ಬೆಲ್ಲ ಹಾಕಿ ಒಂದೆಳೆ ಪಾಕ ಮಾಡಿಕೊಳ್ಳಿ.
* ಈ ಕಡೆ ಮಿಕ್ಸಿಂಗ್ ಬೌಲ್ ತೆಗೆದುಕೊಂಡು ಅದಕ್ಕೆ ಪುಡಿ ಮಾಡಿದ ಅಕ್ಕಿ, ಹುರಿದ ಎಳ್ಳು, ಕೊಬ್ಬರಿ ತುರಿ, ಪುಡಿ ಮಾಡಿದ ಹುರಿಗಡಲೆ, ಕಡ್ಲೆಕಾಯಿಬೀಜ, ಏಲಕ್ಕಿ ಹಾಕಿ.
* ಇದಕ್ಕೆ ಒಂದೆಳೆ ಪಾಕವನ್ನು ಬಿಸಿಯಾಗಿರುವಾಗಲೇ ಸೇರಿಸಿ ಕಲಸಿ ಉಂಡೆ ಕಟ್ಟಿ.
* ಪಾಕ ಬಿಸಿ ಇರುವಾಗಲೇ ಉಂಡೆ ಕಟ್ಟಬೇಕು. ಇಲ್ಲವಾದಲ್ಲಿ ಉಂಡೆ ಒಡೆದು ಹೋಗುತ್ತದೆ. ಇದನ್ನೂ ಓದಿ: ಗೋಕಾಕ್‌ನ ಫೇಮಸ್ ಕರದಂಟು ಸವಿದಿದ್ದೀರಾ?

Share This Article
Leave a Comment

Leave a Reply

Your email address will not be published. Required fields are marked *