ಹಳೆ ತಲೆಮಾರಿನ ಕೊಂಡಿಯನ್ನು ಕಳೆದುಕೊಂಡೆವು – ನಟಿ ತಾರಾ

Public TV
1 Min Read

ಬೆಂಗಳೂರು: ಶಿವರಾಂ ಅವರ ಸಾವು ತುಂಬಾ ನೋವುಂಟು ಮಾಡಿದೆ. ಇವರಿಗೆ ಭಾರತೀಯ ಹಲವು ಭಾಷಾ ಚಿತ್ರರಂಗದ ಕಲಾವಿದರ ಪರಿಚಯ ತುಂಬಾ ಚೆನ್ನಾಗಿ ಇತ್ತು ಎಂದು ನಟಿ ತಾರಾ ಹೇಳಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ಅವರೊಂದಿಗೆ ಭಜನೆ ಕಾರ್ಯಕ್ರಮಗಳಿಗೆ ಹೋಗುತ್ತಿದ್ದೆ. ಇವರು ಓರ್ವ ಅಯ್ಯಪ್ಪ ಸ್ವಾಮಿ ಅವರ ಮಹಾನ್ ದೈವ ಭಕ್ತರು ಆಗಿದ್ದರು ಎಂದು ನೆನಪಿಸಿಕೊಂಡರು. ಇದನ್ನೂ ಓದಿ: ಸಾಮಾನ್ಯ ವ್ಯಕ್ತಿಯಲ್ಲ ಶಿವರಾಂ, ಅವರಂತೆ ಯಾರು ಮತ್ತೆ ಹುಟ್ಟಿ ಬರಲು ಸಾಧ್ಯವಿಲ್ಲ: ದ್ವಾರಕೀಶ್

ಇವರಿಗೆ ಸಿನಿಮಾ ರಂಗದ ಬಗ್ಗೆ ತಿಳಿಯದ ವಿಚಾರವಿಲ್ಲ. ನಟ ರಜನಿಕಾಂತ್, ಡಾ.ವಿಷ್ಣುವರ್ಧನ್, ಡಾ.ರಾಜ್‍ಕುಮಾರ್, ಚಲನಚಿತ್ರ ನಿದೇರ್ಶಕ ಪುಟ್ಟಣ್ಣಕಣಗಲ್, ನಟ ಕಲ್ಯಾಣ್‍ಕುಮಾರ್ ಇವರೊಡನೆ ಉತ್ತಮ ಒಡನಾಟವನ್ನು ಹೊಂದಿದ್ದರು ಹಾಗೂ ಈ ಎಲ್ಲಾ ವ್ಯಕ್ತಿಗಳ ಬಗ್ಗೆ ನನಗೆ ಗೊತ್ತಿಲ್ಲದ ಕೆಲವು ವಿಚಾರಗಳನ್ನು ತಿಳಿಸಿದ್ದರು. ಇದನ್ನೂ ಓದಿ: ಕನ್ನಡದ ಹಿರಿಯ ನಟ ಶಿವರಾಂ ಇನ್ನಿಲ್ಲ

ಚಲನಚಿತ್ರರಂಗದ ಹಳೆ ತಲೆಮಾರಿನವರನ್ನು ಕಳೆದುಕೊಳ್ಳುತ್ತಿದ್ದೇವೆ. ಇದು ಚಂದನವನಕ್ಕೆ ದೊಡ್ಡ ಹೊಡೆತವನ್ನು ನೀಡಿದೆ ಎಂದು ನಟಿ ತಾರಾ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *