ಪರಿಸರ ಪ್ರೇಮಿಗಳಲ್ಲಿ ಕ್ಷಮೆ ಕೇಳಿದ ಶಿವಣ್ಣ

Public TV
1 Min Read

ಬೆಂಗಳೂರು: ಸ್ಯಾಂಡಲ್‍ವುಡ್‍ನ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಪರಿಸರ ಪ್ರೇಮಿಗಳಲ್ಲಿ ಕ್ಷಮೆಯನ್ನು ಕೇಳಿದ್ದಾರೆ.

ನಟ ಶಿವರಾಜ್ ಕುಮಾರ್ ಮಲ್ಲೇಶ್ವರಂ ನಲ್ಲಿರುವ ಕಲ್ಯಾಣ್ ಜ್ಯುವೆಲರ್ಸ್ ನ ಹೊಸ ಶೋರೂಂನ ಉದ್ಘಾಟನೆಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಶೋರೂಂಗೆ ಅಡ್ಡಲಾಗಿದ್ದ ಎರಡು ಮರಗಳನ್ನು ಶೋರೂಂ ಅವರು ಅಂಗಡಿ ಕಾಣುವುದಿಲ್ಲ ಎಂದು ಕಡಿಸಿದ್ದಾರೆ. ಇದರಿಂದ ಪರಿಸರ ಪ್ರೇಮಿಗಳು ಆಕ್ರೋಶಗೊಂಡು ಪ್ರತಿಭಟನೆಯನ್ನು ಮಾಡಲು ಆರಂಭಿಸಿದ್ದರು.

ಉದ್ಘಾಟನೆ ಮಾಡಲು ಸಮಾರಂಭಕ್ಕೆ ಆಗಮಿಸಿದ ಶಿವಣ್ಣಗೂ ಪ್ರತಿಭಟನೆಯ ಬಿಸಿ ತಟ್ಟಿದೆ. ಆದ್ದರಿಂದ ಪ್ರತಿಭಟನಕಾರರ ಮನವೊಲಿಸಿ ಕಲ್ಯಾಣ್ ಜ್ಯುವೆಲರ್ಸ್ ಪರವಾಗಿ ಕ್ಷಮೆಯನ್ನು ಕೇಳಿದ್ದಾರೆ. ಅಷ್ಟೇ ಅಲ್ಲದೇ ಜ್ಯುವೆಲ್ಲರ್ಸ್ ಅಂಗಡಿ ಮುಂದೆ ಗಿಡವೊಂದನ್ನು ನೆಟ್ಟು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಒಂದು ಸಣ್ಣ ತಪ್ಪಾಗಿದೆ. ಅದನ್ನು ಮುಂದುವರೆಸಿಕೊಂಡು ಹೋಗೋದು ಬೇಡ. ಇವತ್ತು ಒಂದು ಗಿಡ ನೆಟ್ಟಿದ್ದೇವೆ. ಇನ್ನೂ ನೂರು ಗಿಡ ನೆಡುತ್ತೇವೆ. ನಾನು ನಿಮ್ಮೆಲ್ಲರ ಮುಂದೆ ಪ್ರಾಮಿಸ್ ಮಾಡುತ್ತೇನೆ. ನಿಮ್ಮೆಲ್ಲರಿಗೂ ಬೇಜರಾಗಿದ್ದರಿಂದ ಕ್ಷಮಿಸಿ, ಕ್ಷಮಿಸಿ ಎಂದು ಪರಿಸರ ಪ್ರೇಮಿಗಳಲ್ಲಿ ಎರಡು ಬಾರಿ ಕ್ಷಮೆ ಕೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *