ಶಿರೂರು ಶ್ರೀಗಳ ಕೊನೆಯ ಮಾತು

Public TV
1 Min Read

ಬೆಂಗಳೂರು: ಶಿರೂರು ಶ್ರೀಗಳು ಪತ್ರಕರ್ತರೊಂದಿಗೆ ಪಟ್ಟದ ದೇವರ ವಿಚಾರವಾಗಿ ಮಾತನಾಡಿರುವ ವಿಡಿಯೋವೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

ಶ್ರೀಗಳ ಕೊನೆಯ ಮಾತು:
ನಾನು ಪದೇ ಪದೇ ಆಸ್ಪತ್ರೆಗೆ ದಾಖಲಾಗುತ್ತಿದ್ದರಿಂದ ಪಟ್ಟದ ದೇವರ ವಿಗ್ರಹಗಳನ್ನು ಕೃಷ್ಣ ಮಠಕ್ಕೆ ನೀಡಿದ್ದೆ. ಆದ್ರೆ ಈಗ ಕೃಷ್ಣ ಮಠ ನನ್ನ ವಿಗ್ರಹಗಳನ್ನು ಮರಳಿ ಕೊಡುತ್ತಿಲ್ಲ. ನನನಗೆ ನನ್ನ ವಿಗ್ರಹಗಳು ಬೇಕು. ಅದಕ್ಕಾಗಿ ನ್ಯಾಯಾಲಯದ ಮೊರೆ ಹೋಗಲು ಸಹ ನಾನು ಸಿದ್ಧ. ನನ್ನ ವಿಗ್ರಹಗಳನ್ನು ಪಡೆಯೋದಕ್ಕಾಗಿ ಸಮಯ ಬಂದಾಗ ಕ್ರಿಮಿನಲ್ ಕೇಸ್ ಹಾಕುತ್ತೇನೆ ಅಂತ ಹೇಳಿದ್ದರು.

ಕೃಷ್ಣ ನನ್ನ ಸ್ವತ್ತು ಅಲ್ಲ, ರಾಮ ನನ್ನ ಸ್ವತ್ತು ಅಲ್ಲ, ವಿಠಲ್ ನನ್ನ ಸ್ವತ್ತು. ನಾನು ನನ್ನ ವಿಗ್ರಹಗಳನ್ನು ಕೇಳಿದರು ಕೊಡುತ್ತಿಲ್ಲ. ಕೃಷ್ಣ ಮಠದೊಳಗೆ ಗನ್ ಮ್ಯಾನ್ ಗಳನ್ನು ನೇಮಿಸಿಕೊಳ್ಳಲಾಗಿದೆ. ಗನ್ ಮ್ಯಾನ್ ವ್ಯವಸ್ಥೆ ಬೇಕಾಗಿರೋದು ನನಗೆ ಆದರೆ ಕೃಷ್ಣ ಮಠದಲ್ಲಿ 50 ಜನ ಗನ್ ಮ್ಯಾನ್‍ಗಳನ್ನು ಇರಿಸಿಕೊಂಡಿದ್ದು ಯಾಕೆ ಎಂದು ಪ್ರಶ್ನಿಸಿದರು. ಎಲ್ಲ ಸ್ವಾಮಿಗಳು ಒಟ್ಟಾಗಿ ಇದ್ದಾರೆ. ಎಲ್ಲ ಸ್ವಾಮಿಗಳು ಲೀಡರ್ ಹೇಳಿದರೆ ಮಾತ್ರ ವಿಗ್ರಹಗಳನ್ನು ಕೊಡುತ್ತೇವೆ ಅಂತಾ ಹೇಳುತ್ತಿದ್ದಾರೆ ಎಂದು ಪೇಜಾವರ ಶ್ರೀಗಳ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದರು.

https://www.youtube.com/watch?v=oIVAFQigp0M

Share This Article
Leave a Comment

Leave a Reply

Your email address will not be published. Required fields are marked *