ನಟಿ ರಾಧಿಕಾಗೆ ಕಾಡುತ್ತಿದ್ದಾಳಾ ಕಾಳಿಮಾತೆ?- ಶೂಟಿಂಗ್ ಸೆಟ್‍ನಲ್ಲಿ ದಿನಕ್ಕೊಂದು ಕುರಿಬಲಿ

Public TV
1 Min Read

ಬೆಂಗಳೂರು: ‘ಭೈರಾದೇವಿ’ ಶೂಟಿಂಗ್ ವೇಳೆಯಲ್ಲಿ ನಟಿ ರಾಧಿಕಾ ಬಿದ್ದು ಗಾಯ ಮಾಡಿಕೊಂಡಿದ್ದು, ಈಗ ಅವರಿಗೆ ಹೆಜ್ಜೆ ಹೆಜ್ಜೆಗೂ ದುಷ್ಟ ಶಕ್ತಿಯ ಸಂಕಷ್ಟ ಎದುರಾಗಿದೆ.

ಶಾಂತಿನಗರದ ಸ್ಮಶಾನದಲ್ಲಿ ರಾಧಿಕಾ ಅವರು ಕಾಳಿ ಅವತಾರವೆತ್ತುವ ಭಾಗದ ಭೈರಾದೇವಿ ಸಿನಿಮಾದ ಶೂಟಿಂಗ್ ನಡೆದಿತ್ತು. ಚಿತ್ರೀಕರಣದ ವೇಳೆಯಲ್ಲಿ ರಾಧಿಕಾ ಅವರು ಗೋರಿ ಮೇಲೆ ಕಾಲಿಟ್ಟು ಎಡವಿ ಬಿದ್ದ ಪರಿಣಾಮ ಸೊಂಟ ಹಾಗೂ ಕಾಲಿಗೆ ಗಾಯವಾಗಿತ್ತು. ಇದನ್ನೂ ಓದಿ: ಶೂಟಿಂಗ್ ವೇಳೆ ಬಿದ್ದು ಗಾಯ ಮಾಡಿಕೊಂಡ ಸ್ಟೀಟಿ ರಾಧಿಕಾ

ಈಗ ನಟಿ ರಾಧಿಕಾ ಅವರಿಗೆ ಕಾಳೆ ಮಾತೆ ಕಾಡುತ್ತಿದೆಯಾ ಎಂಬ ಪ್ರಶ್ನೆ ಶುರುವಾಗಿದೆ. ಏಕೆಂದೆರೆ ಕಾಳಿ ಮಾತೆಯನ್ನು ತಣ್ಣಗೆ ಮಾಡಲು ದಿನಕ್ಕೊಂದು ಕುರಿಯನ್ನು ಬಲಿ ಕೊಡಲಾಗುತ್ತಿದೆ. ಭೈರಾದೇವಿ ಶೂಟಿಂಗ್ ಸೆಟ್ ನಲ್ಲಿ ರಾಧಿಕಾ ಅವರು ಬೆನ್ನು ಮುರಿದುಕೊಂಡಿದ್ದು, ಚಿತ್ರತಂಡಕ್ಕೆ ಹೆಜ್ಜೆ ಹೆಜ್ಜೆಗೂ ಸಂಕಷ್ಟ ಎದುರಾಗುತ್ತಿದೆ.

ರಾಧಿಕಾ ಎಡವಿ ಬಿದ್ದ ನಂತರ ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ ಎಂಬ ಮಾಹಿತಿ ಲಭಿಸಿತ್ತು. ವೈದ್ಯರು 30 ದಿನಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ ಎನ್ನಲಾಗಿತ್ತು. ಆದರೆ ರಾಧಿಕಾ ಈ ಗಾಯವನ್ನು ಲೆಕ್ಕಿಸದೆ ಮರುದಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಶೂಟಿಂಗ್ ವೇಳೆ ಮತ್ತೆ ನೋವು ಕಾಣಿಸಿಕೊಂಡಿತ್ತು. ವೈದ್ಯರ ಸಲಹೆ ಮೇರೆಗೆ ಸದ್ಯ ರಾಧಿಕಾ ಅವರು ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

https://www.youtube.com/watch?v=t2EOwaGlm1o

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *