ಶರಣಬಸಪ್ಪ ಅಪ್ಪ ಲಿಂಗೈಕ್ಯ; ಸಚಿವ ಶರಣಪ್ರಕಾಶ್ ಪಾಟೀಲ್ ಸಂತಾಪ

Public TV
1 Min Read

ರಾಯಚೂರು: ಮಹಾದಾಸೋಹಿ ಶರಣಬಸಪ್ಪ ಅಪ್ಪ ಲಿಂಗೈಕ್ಯ ಹಿನ್ನೆಲೆ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ್ ಪಾಟೀಲ್ (Sharanprakash Patil) ಸಂತಾಪ ಸೂಚಿಸಿದ್ದಾರೆ.

ರಾಯಚೂರಿನಲ್ಲಿ (Raichur) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಶರಣಬಸವೇಶ್ವರ ದೇವಸ್ಥಾನ ಅಂದ್ರೆ ಪೂಜ್ಯನೀಯ ಭಾವನೆ ಇದೆ. ಪೀಠಾಧಿಪತಿ ಶರಣಬಸಪ್ಪ ಅಪ್ಪ ಅವರು ಲಿಂಗೈಕ್ಯ ಆಗಿದ್ದರಿಂದ ದುಃಖ ತಂದಿದೆ. ಇಂದು ಅಂತಿಮ ವಿಧಿವಿಧಾನ ಜರುಗಲಿದ್ದು, ಸಂತಾಪ ಸೂಚಿಸುತ್ತಿದ್ದೇನೆ. ವಿಶೇಷವಾಗಿ ದೇವಸ್ಥಾನದ ಪ್ರಭಾವ ಈ ಭಾಗದಲ್ಲಿ ಬಹಳಷ್ಟು ಇದೆ ಎಂದಿದ್ದಾರೆ. ಇದನ್ನೂ ಓದಿ: ಶರಣಬಸಪ್ಪ ಅಪ್ಪ ಲಿಂಗೈಕ್ಯ – ಅಂತ್ಯಕ್ರಿಯೆಗೆ 1 ಲಕ್ಷಕ್ಕೂ ಅಧಿಕ ಬಿಲ್ವಪತ್ರೆ, 5050 ವಿಭೂತಿ ಸಿದ್ಧತೆ

ಅನ್ನದಾಸೋಹ, ಶಿಕ್ಷಣ ದಾಸೋಹ ಮುಖಾಂತರ ನಾಡಿನ ಜನರ ಮನಸ್ಸನ್ನ ಶರಣಬಸಪ್ಪ ಅಪ್ಪಾ ಗೆದ್ದಿದ್ದಾರೆ. ಇನ್ನೂ ಆಧ್ಯಾತ್ಮದ ಕಡೆಗೆ ಜನರನ್ನು ಸೆಳೆಯುವಲ್ಲೂ ಅವರ ಅಪಾರ ಕೊಡುಗೆಯಿದೆ ಎಂದು ಹೇಳಿದ್ದಾರೆ.

Share This Article