ಹೊಯ್ಸಳರಿಗೆ ಜೊತೆಯಾದ ಶಾನ್ವಿ ಶ್ರೀವಾಸ್ತವ!

Public TV
1 Min Read

ಬೆಂಗಳೂರು: ಕನ್ನಡದಲ್ಲಿ ಮತ್ತೊಮ್ಮೆ ಮಲ್ಟಿ ಸ್ಟಾರ್ ಚಿತ್ರಗಳ ಜಮಾನ ಮರುಕಳಿಸಿದೆ. ಈ ಹಿಂದೆ ಉಪೇಂದ್ರ ಮುಕುಂದ ಮುರಾರಿ ಚಿತ್ರದ ಮೂಲಕ ಕಿಚ್ಚ ಸುದೀಪ್ ಅವರಿಗೆ ಜೊತೆಯಾಗಿ ನಟಿಸಿದ್ದರು. ಇದೀಗ ಅದೇ ಉಪೇಂದ್ರ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಜೊತೆ ನಟಿಸುತ್ತಿದ್ದಾರೆ. ಓಂಪ್ರಕಾಶ್ ರಾವ್ ನಿರ್ದೇಶನ ಮಾಡಲಿರೋ ಈ ಚಿತ್ರಕ್ಕೆ ‘ಹೊಯ್ಸಳ’ ಎಂಬ ಹೆಸರಿಡಲಾಗಿದೆ.

ಹೊಸಾ ವಿಚಾರವೆಂದರೆ, ಇದೀಗ ಈ ಹೊಯ್ಸಳರಿಗೆ ನಾಯಕಿಯರು ಸಿಕ್ಕಿದ್ದಾರೆ. ಮಾಸ್ಟರ್ ಪೀಸ್ ಖ್ಯಾತಿಯ ನಟಿ ಶಾನ್ವಿ ಶ್ರೀವಾಸ್ತವ ಮತ್ತು ಮಂಗಳೂರು ಮೂಲದ ಮಾಡೆಲಿಂಗ್ ಬೆಡಗಿ ನಮಿತಾ ರತ್ನಾಕರ್ ಈ ಚಿತ್ರಕ್ಕೆ ನಾಯಕಿಯರಾಗಿ ಸೆಲೆಕ್ಟಾಗಿದ್ದಾರೆ.

ರವಿಚಂದ್ರನ್ ಮತ್ತು ಉಪ್ಪಿ ಕಾಂಬಿನೇಷನ್ನಿನ ಮೂಲಕ ಒಂದು ಗ್ಯಾಪಿನ ನಂತರ ಓಂಪ್ರಕಾಶ್ ರಾವ್ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಒಂದಷ್ಟು ಕಾಲದಿಂದ ಈ ಚಿತ್ರಕ್ಕೆ ನಾಯಕಿಯರ ಹುಡುಕಾಟದಲ್ಲಿದ್ದ ಓಂಪ್ರಕಾಶ್ ರಾವ್ ಕಡೆಗೂ ಆ ಆಯ್ಕೆ ನಡೆಸಿ ಈ ವಿಚಾರವನ್ನು ಬಿಟ್ಟುಕೊಟ್ಟಿದ್ದಾರೆ. ಆದರೆ ಶಾನ್ವಿ ಮತ್ತು ನಮಿತಾ ಯಾರಿಗೆ ಜೋಡಿಯಾಗಿ ನಟಿಸಲಿದ್ದಾರೆಂಬುದನ್ನು ಮಾತ್ರ ಸಸ್ಪೆನ್ಸ್ ಆಗಿಡಲಾಗಿದೆ!

ಹೊಯ್ಸಳ ಚಿತ್ರಕ್ಕೆ ನಾಯಕಿಯರ ಆಯ್ಕೆಯ ಮೂಲಕ ತಾರಾಗಣದ ಆಯ್ಕೆ ಕಾರ್ಯವೆಲ್ಲವೂ ಸಮಾಪ್ತಿಗೊಂಡಿದೆ. ಇನ್ನೊಂದಷ್ಟು ದಿನಗಳಲ್ಲಿ ಈ ಬಗೆಗಿನ ಮಾಹಿತಿಯನ್ನು ಓಂಪ್ರಕಾಶ್ ಕೊಡಲಿದ್ದಾರಂತೆ. ಇದೇ ಆಗಸ್ಟ್ ತಿಂಗಳಲ್ಲಿ ಫೋಟೋ ಶೂಟ್ ಮುಗಿಸಿಕೊಂಡು, 20ನೇ ತಾರೀಕಿನಿಂದ ಚಿತ್ರೀಕರಣಕ್ಕೆ ಚಾಲನೆ ನೀಡಲು ಓಂಪ್ರಕಾಶ್ ರಾವ್ ನಿರ್ಧರಿಸಿದ್ದಾರಂತೆ.

Share This Article
Leave a Comment

Leave a Reply

Your email address will not be published. Required fields are marked *