ಕೊರೊನಾ ಭೀತಿಗೆ ಶನಿದೇವರ ಜಾತ್ರೆ ರದ್ದು

Public TV
1 Min Read

ಹಾಸನ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಅಂಗಡಿಹಳ್ಳಿ ಸಮೀಪ ನಡೆಯಬೇಕಿದ್ದ ಶನಿದೇವರ ಜಾತ್ರಾ ಮಹೋತ್ಸವ ನಿಲ್ಲಿಸಲಾಗಿದೆ.

ಇಂದು ನಡೆಯಬೇಕಿದ್ದ ಶನಿದೇವರ ಜಾತ್ರೆಯನ್ನು ಅಧಿಕಾರಿಗಳ ಸೂಚನೆ ಮೆರೆಗೆ ರದ್ದು ಮಾಡಲಾಗಿದೆ. ಇದರಿಂದ ನಿರಾಶರಾಗಿರುವ ಜಾತ್ರೆಗೆ ವ್ಯಾಪಾರ ಮಾಡಲು ಬಂದಿದ್ದ ಅಂಗಡಿ ವ್ಯಾಪಾರಿಗಳು ಗಂಟುಮೂಟೆ ಕಟ್ಟಿ ವಾಪಸ್ ಆಗುತ್ತಿದ್ದಾರೆ.

ಜಾತ್ರಾ ರಥೋತ್ಸವ ರದ್ದಾಗಿದ್ದರು ಕೂಡ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ. ಶುಕ್ರವಾರ ರಾತ್ರಿ ವಿದ್ಯುತ್ ದೀಪಾಲಂಕಾರದೊಂದಿಗೆ ಶನಿ ದೇವರ ಉತ್ಸವ ಮೂರ್ತಿಯನ್ನು ವಿಜೃಂಭಣೆಯಿಂದ ನೆರವೇರಿಸಲಾಗಿತ್ತು.

ತಾಲೂಕಿನ ಹಾಗೂ ಸುತ್ತಮುತ್ತಲಿನ ಸಾವಿರಾರು ಸಾರ್ವಜನಿಕರು ಸೇರಿ ಮಾಡುವ ಜಾತ್ರೆಯಾಗಿದ್ದರಿಂದ ತಿಂಡಿ ಊಟದ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿತ್ತು. ಇದೀಗ ಎಲ್ಲವನ್ನೂ ಮೊಟಕುಗೊಳಿಸಿರುವುದು ಭಕ್ತಾದಿಗಳ ನಿರಾಸೆಗೆ ಕಾರಣವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *