ಭರ್ಜರಿಯಾಗಿ ಎಂಟ್ರಿಯಾಗಿ ರಾಹುಲ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದ್ರು ಜೆಡಿಎಸ್ ರೆಬೆಲ್ ನಾಯಕರು

Public TV
1 Min Read

ಮೈಸೂರು: ಜೆಡಿಎಸ್ ಬಂಡಾಯ ಶಾಸಕರು ಅಧಿಕೃತವಾಗಿ ರಾಹುಲ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಜಮೀರ್ ಅಹ್ಮದ್, ಚೆಲುವನಾರಾಯಣಸ್ವಾಮಿ, ಬಾಲಕೃಷ್ಣ, ಅನ್ಸಾರಿ, ಶ್ರೀನಿವಾಸ್, ರಮೇಶ್ ಬಂಡಿಸಿದ್ದೆಗೌಡ, ಎಂಸಿ ನಾಣಯ್ಯ ಕಾಂಗ್ರೆಸ್ ಸೇರಿದ್ದಾರೆ. ಜೆಡಿಎಸ್ ಬಂಡಾಯ ಶಾಸಕರಿಗೆ ವೇದಿಕೆ ಬಲ ಬಲದಲ್ಲಿ 8 ಕುರ್ಚಿಗಳನ್ನು ಹಾಕಿ ವಿಶೇಷ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ರಾಹುಲ್‍ಗೆ ಚೆಲುವರಾಯಸ್ವಾಮಿ ತಲೆ ಬಾಗಿ ನಮಸ್ಕರಿಸಿದರೆ, ಅಖಂಡ ಶ್ರೀನಿವಾಸ್ ರಾಹುಲ್ ಹಾಗೂ ಸಿಎಂ ಕಾಲಿಗೆ ಅಡ್ಡಬಿದ್ದರು.

ಚಾಮರಾಜಪೇಟೆಯ ಶಾಸಕ ಜಮೀರ್ ಅಹ್ಮದ್ ಖಡ್ಗವನ್ನು ನೀಡಿದರು. ಈ ವೇಳೆ ಜಮೀರ್ ಅಹ್ಮದ್ ಪೇಟಾ ಹಾಕಲು ಮುಂದಾದಾಗ ರಾಹುಲ್ ಬೇಡ ಎಂದು ಹೇಳಿದರು. ಈ ಸಂದರ್ಭದಲ್ಲಿ ಬೆಂಗಳೂರು ಪಾಲಿಕೆಯ ಬಿಜೆಪಿಯ ಮಾಜಿ ಮೇಯರ್ ವೆಂಕಟೇಶ್ ಮೂರ್ತಿ ಸಹ ಕಾಂಗ್ರೆಸ್ಸಿಗೆ ಸೇರ್ಪಡೆಯಾದರು.

 

Share This Article
Leave a Comment

Leave a Reply

Your email address will not be published. Required fields are marked *