ಮಾವುತರಿಂದಲೇ ಮರಿ ಆನೆಗೆ ಥಳಿತ- ಮನಕಲಕುವ ವೀಡಿಯೋ ನೋಡಿ

Public TV
1 Min Read

ಬೆಂಗಳೂರು: ಇತ್ತೀಚೆಗೆ ಊರಿನ ಜನರ ಕೈಯಿಂದ ಏಟು ತಿಂದ ಸಿದ್ದ ಕೊನೆಗೆ ಚೇತರಿಸಿಕೊಳ್ಳಲಾಗದ ಸ್ಥಿತಿ ತಲುಪಿದಾಗ ಎಲ್ರೂ ಆತನ ಚೇತರಿಕೆಗಾಗಿ ಪ್ರಾರ್ಥನೆ ಮಾಡಿದ್ದರು. ಇದೀಗ ಇಂಥದ್ದೇ ಘಟನೆ ಮತ್ತೆ ಮರುಕಳಿಸಿದ್ದು, ಮರಿಯಾನೆಗೆ ಮಾವುತರೇ ಕೋಲು ಹಿಡಿದು ಸರಿಯಾಗಿ ಥಳಿಸಿದ ವಿಡಿಯೋ ವೈರಲ್ ಆಗ್ತಿದೆ.

ದುಬಾರೆ ಎಲಿಫೆಂಟ್ ಕ್ಯಾಂಪ್ ನಲ್ಲಿ ನೀರಿಗಿಳಿಯದ ಮರಿಯಾನೆಗೆ ಮಾವುತರು ರಾಕ್ಷಸರಂತೆ ಹೊಡೆಯುತ್ತಾರೆ. ಪುಟ್ಟ ಆನೆ ಏಟಿನ ಹೊಡೆತ ತಾಳಲಾರದೇ ನೀರಿಗೆ ಬಿದ್ದು ಒದ್ದಾಡಿದ್ರು ಈ ರಾಕ್ಷಸರು ಬಿಡದೇ ಏಟು ನೀಡುತ್ತಾರೆ. ಪಕ್ಕದಲ್ಲಿ ನಿಂತಿದ್ದ ತಾಯಾನೆ ಇದೆಲ್ಲವನ್ನು ಮರುಗುತ್ತ ನೋಡೋ ದೃಶ್ಯ ಎಂಥವರ ಕಣ್ಣಲ್ಲಿ ನೀರು ತರಿಸುತ್ತೆ. ಇದೀಗ ಈ ಮಾವುತರ ವಿರುದ್ಧ ಅರುಣ್ ಪ್ರಸಾದ್ ಅನ್ನೋರು ಬೆಂಗಳೂರು ಪೊಲೀಸ್ ಕಮೀಷನರ್‍ಗೆ ಹಾಗೂ ಮುಖ್ಯ ವನ್ಯಜೀವಿ ಸಂರಕ್ಷಣಾಧಿಕಾರಿಗೆ ದೂರು ನೀಡಲು ನಿರ್ಧರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *