ರಚನಾ ಕೊನೆಯ ಆಸೆ ಏನಾಗಿತ್ತು? ಅಪಘಾತ ಆಗಿದ್ದು ಹೇಗೆ?

Public TV
1 Min Read

ಬೆಂಗಳೂರು: ಧಾರಾವಾಹಿಗಳಲ್ಲಿ ಉದಯೋನ್ಮುಖ ನಟ, ನಟಿಯರಾಗಿದ್ದ ರಚನಾ((23) ಮತ್ತು ಜೀವನ್‍ನ್(25) ಗುರುವಾರ ತಡರಾತ್ರಿ ನೆಲಮಂಗಲದ ಸೋಲೂರು ಬಳಿಯ ಹೈವೆಯಲ್ಲಿ ಭೀಕರ ಅಪಘಾತಕ್ಕೆ ಬಲಿಯಾಗಿದ್ದಾರೆ.

ಸಹನಟರ ಜೊತೆ ಚಿತ್ರೀಕರಣ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನಕ್ಕೆ ಕಾರ್‍ನಲ್ಲಿ ಎಲ್ಲರೂ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಹೆದ್ದಾರಿಯಲ್ಲಿ ಬಸ್ ಬಂತೆಂದು ಎಡಭಾಗಕ್ಕೆ ಕಾರನ್ನು ಚಲಾಯಿಸಿ ನಿಂತಿದ್ದ ಕ್ಯಾಂಟರ್ ಗೆ ಸಫಾರಿ ಕಾರು ಡಿಕ್ಕಿ ಹೊಡೆದಿದ್ದಾಗಿ ಗಾಯಾಳುಗಳು ಪೊಲೀಸರ ಬಳಿ ಹೇಳಿಕೆ ನೀಡಿದ್ದಾರೆ.

ಘಟನೆಯಲ್ಲಿ ಗಾಯಗೊಂಡ ಸಹ ನಟರಾದ ಬಿಎಸ್ ರಂಜಿತ್, ಉತ್ತಮ್, ಹೊನ್ನೇಶ್, ಕಾರ್ತಿಕ್, ಮತ್ತು ಎರಿಕ್ ಈ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ಆದರೂ ಕಾರಿನಲ್ಲಿದ್ದವರು ಮದ್ಯಪಾನ ಮಾಡಿದ್ದರು ಎನ್ನಲಾಗಿದೆ. ಘಟನೆ ಸಂಬಂಧ ಮಾಗಡಿಯ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಶವ ಒಪ್ಪಿಸಲಾಯಿತು. ಬಳಿಕ ಆರ್‍ಆರ್ ನಗರದ ರಚನಾ ನಿವಾಸದ ಬಳಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಬಳಿಕ ಕೆಂಗೇರಿಯ ವಿದ್ಯುತ್ ಚಿತಾಗಾರದಲ್ಲಿ ರಚನಾ ಮತ್ತು ಜೀವನ್ ಮೃತದೇಹವನ್ನು ಅಂತ್ಯ ಸಂಸ್ಕಾರ ಮಾಡಲಾಯಿತು.

ತ್ರಿವೇಣಿ ಸಂಗಮ, ಮಹಾನದಿ ಧಾರಾವಾಹಿಗಳಲ್ಲಿ ರಚನಾ ನಟಿಸುತ್ತಿದ್ದರೆ, ಮಜಾ ಭಾರತ ರಿಯಾಲಿಟಿ ಶೋನಲ್ಲಿ ಜೀವನ್ ನಟಿಸುತ್ತಿದ್ದರು.

ಕೊನೆಯ ಆಸೆ: ಖಾಸಗಿ ವಾಹಿನಿ ನಡೆಸಿಕೊಡುವ ಡ್ಯಾನ್ಸ್ ಡ್ಯಾನ್ಸ್ ಜ್ಯೂನಿಯರ್ ಕಾರ್ಯಕ್ರಮದಲ್ಲಿ ಕೊರಿಯೋಗ್ರಫರ್ ಕಮ್ ಜ್ಯೂರಿ ಸಲ್ಮಾನ್ ಭೇಟಿಯಾಗಿ ತಮ್ಮ ಮನದಾಳವನ್ನು ರಚನಾ ಹಂಚಿಕೊಂಡಿದ್ದರು. ಕೊನೆಯಾಸೆಯಂತೆ ಸಲ್ಮಾನ್ ಜೊತೆ ರಚನಾ ಡ್ಯಾನ್ಸ್ ಮಾಡಿದ್ದರು. ರಚನಾ ಡ್ಯಾನ್ಸ್ ನೋಡಿ ಟೆಡ್ಡಿಬೇರ್ ಗೊಂಬೆಯನ್ನು ಸಲ್ಮಾನ್ ಉಡುಗೊರೆಯಾಗಿ ನೀಡಿದ್ದರು.

https://youtu.be/eU7SEeUcTJ8

https://youtu.be/78wSqmIpRo0

ಚಿತ್ರ ಕೃಪೆ: ಸ್ಟಾರ್ ಸುವರ್ಣ

Share This Article
Leave a Comment

Leave a Reply

Your email address will not be published. Required fields are marked *