ಬಾದಾಮಿ ಅಭಿವೃದ್ಧಿಗೆ ಬಿಜೆಪಿಯಿಂದ ಪ್ರತ್ಯೇಕ ಪ್ರಣಾಳಿಕೆ- ಯಾವೆಲ್ಲ ಭರವಸೆಗಳಿವೆ?

Public TV
1 Min Read

ಬಾಗಲಕೋಟೆ: ಕಾಂಗ್ರೆಸ್‍ನಿಂದ ಬಾದಾಮಿ ಅಭಿವೃದ್ಧಿಗೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಬೆನ್ನೆಲ್ಲೇ ಬಿಜೆಪಿ ಕೂಡ ಬಾದಾಮಿಯ ಮುನ್ನೋಟ ಕೈಪಿಡಿ ಬಿಡುಗಡೆ ಮಾಡಿದೆ.

24*7 ವಿದ್ಯುತ್ ಪೂರೈಕೆ, ಎಪಿಎಂಸಿ ಮಾರುಕಟ್ಟೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ, ಕೆಂದೂರು ಕೆರೆ ಹೂಳೆತ್ತುವುದು, ರಸ್ತೆಗಳ ಕಾಂಕ್ರಿಟೀಕರಣ, ಕೆರೂರುನಲ್ಲಿ ನೂತನ ಕಣ್ಣಿನ ಆಸ್ಪತ್ರೆ ನಿರ್ಮಾಣ, ಪ್ರವಾಸಿ ತಾಣಗಳ ಅಭಿವೃದ್ಧಿ, ಪ್ರತಿ ಬ್ಲಾಕ್‍ಗೆ ಉಚಿತ ಆಂಬುಲೆನ್ಸ್ ಸೇವೆ, ಕೈಮಗ್ಗ ಉತ್ತೇಜಿಸಲು ಕಾರ್ಖಾನೆ ನಿರ್ಮಾಣ ಸೇರಿದಂತೆ ಹಲವು ಭರವಸೆಗಳನ್ನು ನೀಡಿದ್ದಾರೆ.

ಕೈಪಿಡಿ ಬಿಡುಗಡೆ ಬಳಿಕ ಮಾತನಾಡಿದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು, ಸಿದ್ದರಾಮಯ್ಯಗೆ ಹಣದಿಂದ ಗೆಲ್ಲುವ ಅಹಂಕಾರ ತುಂಬಿದೆ ಅಂತ ಏಕವಚನದಲ್ಲಿ ಕಿಡಿಕಾರಿದ್ದಾರೆ. ಸಿದ್ದರಾಮಯ್ಯನ ಪಾಪದ ಮೂಟೆ ಅವರನ್ನು ಬಾದಾಮಿಯಲ್ಲಿ ಸೋಲಿಸುತ್ತೆ ಅಂತ ವಾಗ್ದಾಳಿ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *