ರವಿ ಪೂಜಾರಿಯನ್ನು ಬೇರೆ ಜೈಲಿಗೆ ಶಿಫ್ಟ್ ಮಾಡೋದಾಗಿ ಹೇಳಿ ಕರ್ನಾಟಕ ಪೊಲೀಸರಿಗೆ ಹಸ್ತಾಂತರ

Public TV
1 Min Read

ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿಯನ್ನ ಸೆನೆಗಲ್ ಜೈಲಿನಿಂದ ಬೇರೊಂದು ಜೈಲಿಗೆ ಕಳಿಸಿ ಕೊಡುವುದಾಗಿ ಹೇಳಿ ಅಲ್ಲಿನ ಪೊಲೀಸರು ಕರ್ನಾಟಕ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಡಾನ್ ರವಿ ಪೂಜಾರಿ ಒಂದೂವರೆ ವರ್ಷದಿಂದ ಸೆನೆಗಲ್ ಜೈಲಿನಲ್ಲಿದ್ದ. ಆರೋಪಿ ರವಿ ಪೂಜಾರಿಯ ಮೇಲೆ ಭಾರತದಲ್ಲಿ ಗಂಭೀರವಾದ ನೂರಾರು ಕೇಸ್‍ಗಳು ಇದ್ದುದರಿಂದ ರಾಜ್ಯದ ಪೊಲೀಸರು ಡಾನ್ ಪೂಜಾರಿಯನ್ನು ವಶಕ್ಕೆ ಪಡೆಯಲು ಪ್ರಯತ್ನಿಸುತ್ತಿದ್ದರು. ಆದರೆ ರವಿ ಪೂಜಾರಿ ಮಾತ್ರ ಸೆನೆಗಲ್ ಜೈಲಿನಿಂದ ಭಾರತಕ್ಕೆ ಬರಲು ಸುತಾರಾಂ ಒಪ್ಪುತ್ತಿರಲಿಲ್ಲ. ಸೆನೆಗಲ್ ಪೊಲೀಸರು ಎಷ್ಟೇ ಪ್ರಯತ್ನ ಪಟ್ಟರು ಆರೋಪಿ ಭಾರತಕ್ಕೆ ಬರಲು ಒಪ್ಪುತ್ತಿರಲಿಲ್ಲ ಹೀಗಾಗಿ ಪ್ಲಾನ್ ಮಾಡಿ ರಾಜ್ಯದ ಪೊಲೀಸರಿಗೆ ಒಪ್ಪಿಸಿದ್ದಾರೆ.

ಹೇಗಾದರೂ ಮಾಡಿ ಭಾರತದ ಪೊಲೀಸರಿಗೆ ಒಪ್ಪಿಸಿಬೇಕೇಂದುಕೊಂಡಿದ್ದ ಸೆನೆಗಲ್ ಪೊಲೀಸರು, ಹೊಸ ಪ್ಲಾನ್ ಮಾಡಿ, ಭದ್ರತೆಯ ದೃಷ್ಠಿಯಿಂದ ಡಾನ್ ರವಿಪೂಜಾರಿಯನ್ನು ಬೇರೊಂದು ಜೈಲಿಗೆ ಶಿಫ್ಟ್ ಮಾಡುವ ಅನಿರ್ವಾಯತೆ ಇದೆ. ಹೀಗಾಗಿ ಬೇರೆ ಜೈಲಿಗೆ ಶಿಫ್ಟ್ ಮಾಡಲಾಗುವುದು ಎಂದು ಹೇಳಿ ಕರ್ನಾಟಕರದ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಸಿಸಿಬಿ ಪೊಲೀಸರ ಕಸ್ಟಡಿಯಲ್ಲಿರುವ ಡಾನ್ ತನಿಖೆ ಎದುರಿಸುತ್ತಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *