ಸೆಲ್ಫೀ ತೆಗೆಯುವಾಗ ಕಲ್ಲು ಕ್ವಾರಿಗೆ ಬಿದ್ದು ಬೆಂಗಳೂರು ವಿದ್ಯಾರ್ಥಿ ಸಾವು

Public TV
1 Min Read

ಬೆಂಗಳೂರು: ಎರಡು ದಿನಗಳ ಹಿಂದೆಯಷ್ಟೇ ವಂಡರ್ ಲಾ ಬಳಿ ರೈಲು ಹಳಿ ಮೇಲೆ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಮೂವರು ಕಾಲೇಜು ವಿದ್ಯಾರ್ಥಿಗಳು ಮೃತಪಟ್ಟಿದ್ದರು. ಈ ಘಟನೆಯ ಕಹಿ ನೆನಪು ಮಾಸುವ ಮುನ್ನವೇ ನಗರದ ವಿದ್ಯಾರ್ಥಿಯೊಬ್ಬ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಕಲ್ಲು ಕ್ವಾರಿಗೆ ಬಿದ್ದು ಮೃತಪಟ್ಟಿದ್ದಾನೆ.

ಖಾಸಗಿ ಕಾಲೇಜು ವಿದ್ಯಾರ್ಥಿ ಅಖಿಲೇಶ್ (19) ಎಂಬಾತ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಆಯತಪ್ಪಿ ಕಲ್ಲು ಕ್ವಾರಿಗೆ ಬಿದ್ದು ಮೃತಪಟ್ಟಿದ್ದಾನೆ.

ಗುರುವಾರ ಕೊತ್ತನೂರು ಬಳಿಯ ದೊಡ್ಡೆಗೌಡನ ಕಲ್ಲು ಕ್ವಾರಿಗೆ ಸ್ನೇಹಿತರೊಂದಿಗೆ ಅಖಿಲೇಶ್ ಬಂದಿದ್ದಾನೆ. ಕ್ವಾರಿ ಬಳಿ ಸೆಲ್ಫಿ ಕ್ಲಿಕ್ಕಿಸುವಾಗ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾನೆ.

ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹವನ್ನು ಅಂಬೇಡ್ಕರ್ ಕಾಲೇಜಿಗೆ ರವಾನಿಸಲಾಗಿದ್ದು, ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಸೆಲ್ಫಿಗೆ ಹುಚ್ಚಿಗೆ ರೈಲು ಹಳಿ ಮೇಲೆ ಬಿತ್ತು ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳ ಹೆಣ

Share This Article
Leave a Comment

Leave a Reply

Your email address will not be published. Required fields are marked *