ಕಾಫಿನಾಡಲ್ಲಿ ಡಿಸೆಂಬರ್ 1 ರಿಂದ 3ರವರೆಗೆ ನಿಷೇಧಾಜ್ಞೆ

Public TV
0 Min Read

ಚಿಕ್ಕಮಗಳೂರು: ಡಿಸೆಂಬರ್ 1 ರಿಂದ 3ರವರೆಗೆ ಕಾಫಿನಾಡು ಚಿಕ್ಕಮಗಳೂರಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಡಿಸೆಂಬರ್ 2ರಂದು ಬಾಬಾ ಬುಡನ್‍ಗಿರಿಯಲ್ಲಿರುವ ದತ್ತಪೀಠದಲ್ಲಿ ದತ್ತಜಯಂತಿ ನಡೆಯಲಿದೆ. ಅದೇ ದಿನ ಮುಸ್ಲಿಮರಿಗೆ ಈದ್‍ಮಿಲಾದ್ ಸಂಭ್ರಮ ಕೂಡಾ ಇದೆ. ದತ್ತಜಯಂತಿ ಅಂಗವಾಗಿ ಬೃಹತ್ ಶೋಭಾಯಾತ್ರೆ ನಡೆದ್ರೆ, ಅಂದೇ ಈದ್‍ಮಿಲಾದ್ ಅಂಗವಾಗಿ ಮುಸ್ಲಿಮರು ಮೆರವಣಿಗೆ ಕೂಡ ನಡೆಸಲಿದ್ದಾರೆ.

ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮಧ್ಯಾಹ್ನದವರೆಗೆ ಮುಸ್ಲಿಮರಿಗೆ ಮೆರವಣಿಗೆಗೆ ಅನುಮತಿ ನೀಡಿದ್ದು, ಮಧ್ನಾಹ್ನದ ನಂತರ ಶೋಭಾಯಾತ್ರೆಗೆ ಅವಕಾಶ ಕಲ್ಪಿಸಿದೆ. 3 ದಿನಗಳ ಕಾಲ ಜಿಲ್ಲಾದ್ಯಂತ 144 ಸೆಕ್ಷನ್ ಜಾರಿಗೊಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *