ಕೊಡಗಿನಲ್ಲಿ 12 ದಿನಗಳ ಬಳಿಕ ಶಾಲೆಗಳು ಆರಂಭ- ಮಕ್ಕಳ ಸಂಖ್ಯೆ ಕಂಡು ಕಣ್ಣೀರಿಟ್ಟ ಶಿಕ್ಷಕರು

Public TV
1 Min Read

ಮಡಿಕೇರಿ: ಪ್ರಕೃತಿಯ ಮುನಿಸಿಗೆ ನಲುಗಿಹೋಗಿರುವ ಕೊಡಗಿನಲ್ಲಿ ಇಂದು ಶಾಲೆಗಳು ಪುನಾರಂಭವಗೊಂಡಿವೆ. ಪ್ರವಾಹ ಪೀಡಿತ ಪ್ರದೇಶ ಬಿಟ್ಟು ಕುಶಾಲನಗರ, ವಿರಾಜಪೇಟೆ, ಸೋಮವಾರಪೇಟೆಯಲ್ಲಿ ಶಾಲೆಗಳು ಇಂದಿನಿಂದ ಆರಂಭಗೊಂಡಿವೆ.

12 ದಿನಗಳಿಂದ ಪಾಠವಿಲ್ಲದೇ ಮಕ್ಕಳು ಇಂದು ತರಗತಿಗಳಿಗೆ ಹಾಜರಾಗಿದ್ದಾರೆ. ಆದ್ರೆ ಇಂದು ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಂಡು ಕಣ್ಣೀರು ಹಾಕಿದ್ದಾರೆ.

ಮಳೆ ಬಂದ ಕಾರಣ 12 ದಿನ ರಜೆ ಇತ್ತು. ಗೆಳೆಯರಿಲ್ಲದೇ ಬೇಜಾರಾಗುತ್ತಿತ್ತು. ಶಾಲೆಗ ಹೋಗಬೇಕನ್ನಿಸುತ್ತಿತ್ತು. ಆದ್ರೆ ಇಂದು ಶಾಲೆಗೆ ಬಂದು ತುಂಬಾ ಖುಷಿಯಾಗುತ್ತಿದೆ ಅಂತ ಬೋಯಕೇರಿ ಶಾಲೆಯ ವಿದ್ಯಾರ್ಥಿ ಅನಿರುದ್ಧ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾನೆ.

ಮಕ್ಕಳು ಕರೆ ಮಾಡಿ ಯಾವ ಶಾಲೆ ಆರಂಭವಾಗುತ್ತದೆ ಅಂತ ಕೇಳುತ್ತಾನೇ ಇದ್ರು. ಯಾಕಂದ್ರೆ ಅವರ ಮನಸ್ಥಿತಿ ಕೂಡ ಹಾಗೆಯೇ ಇತ್ತು. ಮಕ್ಕಳಿಗೂ ಕೂಡ ಹೆತ್ತವರನ್ನು ಬಿಟ್ಟು ಹೋಗಲು ಕಷ್ಟವಾಗುತ್ತಿತ್ತು. ಆದ್ರೆ ಇಂದು ಶಾಲೆ ಆರಂಭವಾಗಿದೆ. ಇದೀಗ ಮಕ್ಕಳಿಗಿಂತ ನಮಗೆ ತುಂಬಾ ಸಂತಸವಾಗುತ್ತಿದೆ. ನಮ್ಮ ಶಾಲೆಯ ಮಕ್ಕಳು ಯಾವ ಸ್ಥಿತಿಯಲ್ಲಿದ್ದಾರೆ ಎಂಬುದನ್ನು ನೋಡಲು ಕಾತರದಿಂದ ಕಾಯುತ್ತಿದ್ದೆವು ಅಂತ ಶಿಕ್ಷಕಿಯೊಬ್ಬರು ತಿಳಿಸಿದ್ದಾರೆ.

ಭಾರೀ ಮಳೆಯಿಂದಾಗಿ ಶಾಲೆಯೂ ಕೂಡ ಮುಚ್ಚಿತ್ತು. ತುಂಬಾ ಬೇಜಾರಾಗುತ್ತಿತ್ತು. ಎಲ್ಲಿ ಏನಾಗಿದೆ ಅಂತ ನಾವು ಕರೆ ಮಾಡಿ ತಿಳಿದುಕೊಂಡಿದ್ವಿ. ಯಾವತ್ತೂ ಶಾಲಾ ಆವರಣಕ್ಕೆ ಬರುತ್ತಿದ್ದಂತೆಯೇ ಎಲ್ಲಾ ಮಕ್ಕಳು ಓಡಿಕೊಂಡು ಬರುತ್ತಿದ್ದರು. ಆದ್ರೆ ಇಂದು ಮಕ್ಕಳ ಸಂಖ್ಯೆ ಕಡಿಮೆ ಇದ್ದುದನ್ನು ಕಂಡು ಕಣ್ಣಲ್ಲಿ ನೀರು ಬಂತು. ನಾವು ಬರುತ್ತಿರುವುದನ್ನು ಕಂಡು ಕೆಲ ಮಕ್ಕಳು ಅರ್ಧ ದಾರಿಗೆ ಓಡಿ ಬರುತ್ತಿದ್ದರು. ಇಂದು ಆ ಮಕ್ಕಳನ್ನು ನೆನೆದು ನಿಜವಾಗಲೂ ದುಃಖವಾಯ್ತು ಅಂತ ಮತ್ತೊಬ್ಬ ಶಿಕ್ಷಕಿ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಭಾವುಕರಾದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *