ನಿಂತಿದ್ದ ಲಾರಿಗೆ ಕಾರ್ ಡಿಕ್ಕಿ – ಸ್ಥಳದಲ್ಲೇ ಒಂದೇ ಕುಟುಂಬದ ನಾಲ್ವರ ದಾರುಣ ಸಾವು!

Public TV
1 Min Read

ಹೈದರಾಬಾದ್: ನಿಂತಿದ್ದ ಲಾರಿಗೆ ಕಾರೊಂದು ಡಿಕ್ಕಿ ಹೊಡೆದು ಸ್ಥಳದಲ್ಲೇ ಶಾಲಾ ಮುಖ್ಯಸ್ಥ ಸೇರಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಘಟನೆ ತೆಲಂಗಾಣದ ಪೆದ್ದಪಲ್ಲೆ ಜಿಲ್ಲೆ ಸಮೀಪ ಸಂಭವಿಸಿದೆ.

ಅರುಣ್ ಕುಮಾರ್, ಸೌಮ್ಯ ದಂಪತಿ, ಮಕ್ಕಳಾದ ಅಖಿಲೇಶ್ ಕುಮಾರ್(10), ಸಾನ್ವಿ (8) ಮೃತಪಟ್ಟ ದುರ್ದೈವಿಗಳು. ದಂಪತಿಗಳು ಮೂಲತಃ ಪೆದ್ದಪಲ್ಲೆ ಜಿಲ್ಲೆಯ ಖಾಸಗಿ ಶಾಲೆಯ ಮುಖ್ಯಸ್ಥರು ಎಂದು ತಿಳಿದುಬಂದಿದೆ.

ಶುಕ್ರವಾರ ಮೃತರ ಸಹೋದರ ಹಾಗೂ ಬಾಮೈದನನ್ನು ಹೈದರಾಬಾದ್‍ನ ತಾಂತ್ರಿಕ ಕಾಲೇಜೊಂದರಲ್ಲಿ ಸೇರಿಸಿ ತಮ್ಮ ಕಾರಿನಲ್ಲಿ ಹಿಂತಿರುತ್ತಿದ್ದಾರೆ. ಈ ವೇಳೆ ಹೈದರಾಬಾದ್ – ಕರೀನಗರ ನಡುವಿನ ರಾಜ್ಯ ಹೆದ್ದಾರಿಯ ಕಟ್ನಾಪಳ್ಳಿ ಬಳಿ ನಿಂತಿದ್ದ ಲಾರಿಗೆ ಅಪ್ಪಳಿಸಿ ಸ್ಥಳದಲ್ಲೇ ಕಾರಿನಲ್ಲಿದ್ದ ನಾಲ್ವರು ದಾರುಣ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸುಲ್ತಾನಾಬಾದ್ ಆಸ್ಪತ್ರೆಗೆ ರವಾನಿಸಿದ್ದಾರೆ. ರಸ್ತೆಬದಿ ನಿಂತಿದ್ದ ಲಾರಿಯನ್ನು ಗಮನಿಸದೆ ಅಪಘಾತ ಸಂಭವಿಸಿದ್ದು,  ಗುದ್ದಿದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *