ಬೆಳಗಾವಿ: ನಾವು ಲ್ಯಾಪ್ಟಾಪ್ ಹಂಚುತ್ತಿಲ್ಲ. ಆರೋಪ ಮಾಡುವುದೇ ಬಿಜೆಪಿ ಕೆಲಸ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನವರು ಲ್ಯಾಪ್ಟಾಪ್ ಹಂಚಲಿದ್ದಾರೆ ಎಂಬ ಮಾಜಿ ಶಾಸಕ ಸಂಜಯ್ ಪಾಟೀಲ್ ಆರೋಪಕ್ಕೆ ಉತ್ತರಿಸಿದರು. ಲ್ಯಾಪ್ಟಾಪ್ನ್ನು ನಾವು ಹಂಚುತ್ತಿಲ್ಲ. ಆರೋಪ ಮಾಡುವುದೇ ಅವರ ಕೆಲಸವಾಗಿದೆ. ಸಾಕಷ್ಟು ಸಮಸ್ಯೆಗಳಿವೆ. ಅವುಗಳ ಬಗ್ಗೆ ಏನೂ ಹೇಳದೇ ಅನಾವಶ್ಯಕವಾಗಿ ಏನೋ ಒಂದು ಹೇಳುತ್ತಾರೆ. ಅದು ಅವರ ಚುನಾವಣೆಯ ತಂತ್ರವಾಗಿದೆ. ಆದರೆ, ಜನರು ನಮ್ಮ ಪರವಾಗಿದ್ದಾರೆ. ಅವರ ಮನವೊಲಿಸಿ, ಗೆಲ್ಲುವ ಪ್ರಯತ್ನ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನಪರಿಷತ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳಿಗೆ ವೋಟ್ ಪಡೆಯಬೇಕಿದೆ. ಬಿಜೆಪಿ, ಜೆಡಿಎಸ್ ಸೇರಿ ಎಲ್ಲರಿಗೂ ಫೋನ್ ಮಾಡಿ ನಾವು ಸಂಪರ್ಕಿಸಬಹುದು. ಯಾರು ಯಾರಿಗೆ ಬೇಕಾದರೂ ಫೋನ್ ಮಾಡಬಹುದು. ನಾವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆದರೆ ಮತದಾರರಿಗೆ ಯಾವುದೇ ಪಕ್ಷದ ಸಂಬಂಧ ಇರೋದಿಲ್ಲ. ಒಳ್ಳೆಯವರು ಯಾರು ಇರುತ್ತಾರೆ ಅವರಿಗೆ ಮತ ಹಾಕುತ್ತಾರೆ. ಈ ನಿಟ್ಟಿನಲ್ಲಿ ಸಂಪರ್ಕ ಯಾಕೆ ಮಾಡಬಾರದು? ಬಿಜೆಪಿ, ಜೆಡಿಎಸ್ ಸೇರಿ ಯಾರಿಗೆ ಬೇಕಾದರೂ ಫೋನ್ ಮಾಡಬಹುದು ತಿರುಗೇಟು ನೀಡಿದರು. ಇದನ್ನೂ ಓದಿ: ಲ್ಯಾಪ್ಟಾಪ್ ಹಂಚಿ ಗೆಲ್ಲುವವರು ವಿನ್ನರ್ ಅಲ್ಲ ಕೆಲಸ ಮಾಡಿ ಗೆಲ್ಲುವವರು ವಿಜಯಶಾಲಿಗಳು: ಸಂಜಯ್ ಪಾಟೀಲ್ ವಾಗ್ದಾಳಿ
ಶಿಕ್ಷಕರು, ಪದವೀಧರರು ಎಂದರೆ ಬಹಳಷ್ಟು ತಿಳುವಳಿಕೆ ಇರುವವರಾಗಿದ್ದಾರೆ. ಶಿಕ್ಷಕರ ಸಂಘಟನೆಗಳ ಜೊತೆಗೆ ನಾವು ಗುರುತಿಸಿಕೊಂಡಿಲ್ಲ. ಆದರೆ ಅಲ್ಲಿ ಇರುವವರು ಸ್ವತಂತ್ರವಾಗಿರುವ ಬಹಳಷ್ಟು ಶಿಕ್ಷಕರಿದ್ದಾರೆ. ಕಾಂಗ್ರೆಸ್ ಪಕ್ಷದ ಬೆಂಬಲಿಗರಿದ್ದಾರೆ. ನಮ್ಮ ಪರವಾಗಿ ಎಲ್ಲರೂ ಬರುತ್ತಾರೆ. ಮತದಾರರ ಮನವೊಲಿಸಲು ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಉಕ್ರೇನ್ ನಾಗರಿಕನನ್ನು ಕೊಂದ ರಷ್ಯಾ ಸೈನಿಕನಿಗೆ ಜೀವಾವಧಿ ಶಿಕ್ಷೆ