ದೆಹಲಿಯಲ್ಲಿ ಹೆಚ್‌ಡಿಕೆ ಜೊತೆ ಜಾರಕಿಹೊಳಿ ಸಭೆ

Public TV
1 Min Read

ನವದೆಹಲಿ: ಕಾಂಗ್ರೆಸ್‌ನಲ್ಲಿ(Congress) ಸೀಟ್ ಫೈಟ್, ಹನಿಟ್ರ್ಯಾಪ್‌ ಕದನ ತೀವ್ರಗೊಂಡಿರುವ ಹೊತ್ತಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ದೆಹಲಿ ಪ್ರವಾಸದಲ್ಲಿರುವ ಸಚಿವ ಸತೀಶ್ ಜಾರಕಿಹೊಳಿ (satish jarkiholi) ಮಂಗಳವಾರ ರಾತ್ರಿ ಮತ್ತು ಇಂದು ಕೇಂದ್ರ ಮಂತ್ರಿ ಕುಮಾರಸ್ವಾಮಿ (HD Kumaraswmay) ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

 

ಇದು ನಾನಾ ರೀತಿಯ ಚರ್ಚೆಗಳಿಗೆ ಕಾರಣವಾಗಿದ್ದು ಡಿಕೆ ಶಿವಕುಮಾರ್ (DK Shivakumar) ವಿರೋಧಿ ಪಡೆ ಒಂದಾಗುತ್ತಿದೆಯಾ ಎಂಬ ಪ್ರಶ್ನೆಗಳು ಎದ್ದಿವೆ. ಕುಮಾರಸ್ವಾಮಿ-ಸತೀಶ್ ಜಾರಕಿಹೊಳಿಯ ಡಿನ್ನರ್ ಮೀಟಿಂಗ್ ಅನ್ನು ಸಚಿವ ಎಂಬಿ ಪಾಟೀಲ್ ಸಮರ್ಥನೆ ಮಾಡ್ಕೊಂಡಿದ್ದಾರೆ. ಇದನ್ನೂ ಓದಿ: ಹಾಸನ ಹೊರವರ್ತುಲ ರಸ್ತೆ ಯೋಜನೆಗೆ ಅನುಮೋದನೆ ನೀಡುವಂತೆ ಕೇಂದ್ರಕ್ಕೆ ಹೆಚ್.ಡಿ.ದೇವೇಗೌಡ ಮನವಿ

ಇಬ್ಬರು ಭೇಟಿಯಾದರೆ ತಪ್ಪಿದೆ ಎಂದು ಕೇಳಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್‌ ನಾನು ಯಾರ ವಕ್ತಾರ ಅಲ್ಲ ಎಂದಿದ್ದಾರೆ.

Share This Article