ಜಗ್ಗೇಶ್, ಸಾ.ರಾ.ಗೋವಿಂದು, ವಾಟಾಳ್ ನಾಗರಾಜ್‍ಗೆ ಸಿಸಿಐಯಿಂದ ನೋಟಿಸ್

Public TV
1 Min Read

ಬೆಂಗಳೂರು: ಭಾರತೀಯ ಸ್ಪರ್ಧಾತ್ಮಕ ಆಯೋಗದಿಂದ(ಸಿಸಿಐ)ನಟ ಜಗ್ಗೇಶ್, ಸಾ.ರಾ.ಗೋವಿಂದು, ವಾಟಾಳ್ ನಾಗರಾಜ್ ಮತ್ತು ನಿರ್ದೇಶಕ ಎಂ ಎಸ್ ರಮೇಶ್‍ ಅವರಿಗೆ ನೋಟಿಸ್ ಜಾರಿಯಾಗಿದೆ.

ಕಳೆದ ಮಾರ್ಚ್ 3 ರಂದು ಡಬ್ಬಿಂಗ್ ಚಿತ್ರ `ಸತ್ಯದೇವ್ ಐಪಿಎಸ್’ ಸಿನಿಮಾ ರಿಲೀಸ್ ಆಗಿತ್ತು. ಈ ವೇಳೆ ವಾಟಾಳ್ ನಾಗರಾಜ್ ಸೇರಿದಂತೆ ಸಾ ರಾ ಗೋವಿಂದು, ಜಗ್ಗೇಶ್ ಮುಂತಾದವರು ವಿರೋಧ ವ್ಯಕ್ತಪಡಿಸಿ ಕರ್ನಾಟಕದಲ್ಲಿ ಡಬ್ಬಿಂಗ್ ಸಿನಿಮಾ ಬಿಡುಗಡೆಗೆ ಅಡ್ಡಿಪಡಿಸಿದ್ದರು. ಹೀಗಾಗಿ ಡಬ್ಬಿಂಗ್ ಪರ ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಕೃಷ್ಣಮೂರ್ತಿ ಈ ವಿರೋಧವನ್ನು ಖಂಡಿಸಿ ಸಿಸಿಐಗೆ ದೂರು ನೀಡಿದ್ದರು.

ದೂರಿನ ಹಿನ್ನೆಲೆಯಲ್ಲಿ ಇದೀಗ ಕರ್ನಾಟಕದಲ್ಲಿ ಡಬ್ಬಿಂಗ್ ವಿರೋಧಿಸಿದವರ ಬಗ್ಗೆ ಸಿಸಿಐ ನೋಟಿಸ್ ಜಾರಿ ಮಾಡಿ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಡಬ್ಬಿಂಗ್ ಮಾಡಿದ್ರೆ ಯಾರದ್ದೋ ಮಗುವಿಗೆ ಇನ್ಯಾರೋ ತಂದೆ ಆದಂಗೆ ಇರುತ್ತೆ: ದರ್ಶನ್

ಇದನ್ನೂ ಓದಿ: ಡಬ್ಬಿಂಗ್ ಬೇಕೋ ಬೇಡ್ವೋ ಜನರೇ ತೀರ್ಮಾನ ಮಾಡ್ತಾರೆ: ನಟ ಶಿವರಾಜ್‍ಕುಮಾರ್

 

 

Share This Article
Leave a Comment

Leave a Reply

Your email address will not be published. Required fields are marked *