ತಮಿಳುನಾಡು ಸಿಎಂ ಆಗಲು ಚಿನ್ನಮ್ಮ ಶಶಿಕಲಾ ಸಿದ್ಧತೆ

Public TV
1 Min Read

ಚೆನ್ನೈ: ಜಯಲಲಿತಾ ಅಕಾಲಿಕ ನಿಧನದ ಬಳಿಕ ತಮಿಳುನಾಡಿನ ರಾಜಕೀಯದಲ್ಲಿ ದಿನಕ್ಕೊಂದು ಬೆಳವಣಿಗೆ ನಡೆಯುತ್ತಲೇ ಇದೆ. ಸದ್ಯ ಎಐಎಡಿಎಂಕೆ ಪಕ್ಷದ ಸುಪ್ರೀಮೋ, ಪ್ರಧಾನ ಕಾರ್ಯದರ್ಶಿಯಾಗಿರುವ ಚಿನ್ನಮ್ಮ ಶಶಿಕಲಾ ನಟರಾಜನ್ ಮುಖ್ಯಮಂತ್ರಿ ಕುರ್ಚಿಗೇರೋದು ನಿಶ್ಚಿತವಾಗ್ತಿದೆ.

ಇಂದು ಎಐಎಡಿಎಂಕೆಯ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಹಾಲಿ ಸಿಎಂ ಪನ್ನೀರ್ ಸೇಲ್ವಂ ಬದಲಿಗೆ ಶಶಿಕಲಾ ಅವರನ್ನ ನೂತನ ನಾಯಕಿಯಾಗಿ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ. ಜಯಾಗೆ ಆಪ್ತ ಅಧಿಕಾರಿಯಾಗಿದ್ದ ರಾಜ್ಯ ಸರ್ಕಾರದ ಮುಖ್ಯ ಸಲಹೆಗಾರ್ತಿ ಶೀಲಾ ಬಾಲಕೃಷ್ಣನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ ಇನ್ನಿಬ್ಬರು ಉನ್ನಾತಾಧಿಕಾರಿಗಳಿಗೆ ರಾಜೀನಾಮೆಗೆ ಸೂಚಿಸಿದ್ದಾರೆ.

ಇತ್ತ ಚುನಾವಣಾ ಆಯೋಗದಿಂದ ಶಶಿಕಲಾಗೆ ಆಘಾತ ಎದುರಾಗಿದೆ. ಪಕ್ಷದ ಪ್ರಧಾನ ಕಾರ್ಯದಶಿಯಾಗಿ ಶಶಿಕಲಾ ನೇಮಕ ಸರಿಯಿಲ್ಲ ಎಂದು ರಾಜ್ಯಸಭಾ ಸದಸ್ಯೆ ಶಶಿಕಲಾ ಪುಷ್ಪಾ ಚುನಾವಣಾ ಆಯೋಗದ ಮೆಟ್ಟಿಲೇರಿದ್ರು. ಈ ಅರ್ಜಿಯನ್ನು ಪರಿಗಣಿಸಿದ ಆಯೋಗ, ವಿವರ ಕೋರಿ ನೋಟೀಸ್ ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *